Ticker

6/recent/ticker-posts
Responsive Advertisement

Karna: ನಿಧಿಯ ಕಾರಿಗೆ ಭೀಕರ ಅಪಘಾತ – ಕರ್ಣನ ಕಣ್ಣೆದುರೇ ನಡೆದ ಅಘಾತಕಾರಿ ತಿರುವು

Karna Serial
ಕನ್ನಡ ಟಿವಿ ಪ್ರೇಕ್ಷಕರನ್ನು ಹಿಡಿದುಕೊಂಡಿರುವ ‘ಕರ್ಣ’ ಸೀರಿಯಲ್ ಇದೀಗ ಮತ್ತೊಂದು ಶಾಕ್‌ ನೀಡುವ ಘಟನೆಯೊಂದಿಗೆ ರೋಚಕ ಹಂತಕ್ಕೆ ಕಾಲಿಟ್ಟಿದೆ. ಕರ್ಣ, ನಿತ್ಯಾ, ನಿಧಿ ಮತ್ತು ತೇಜಸ್‌ ಎಲ್ಲರ ಬದುಕಿಗೂ ವಿಲನ್‌ಗಳ ನೆರಳು ಬಿದ್ದಿರುವಂತೆ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಈ ನಾಲ್ವರು ಬೇರೆ ಊರಿಗೆ ಹೊರಟಿರುವ ಸಂದರ್ಭದಲ್ಲಿ ಅಪಾಯಗಳು ಒಂದರ ಹಿಂದೆ ಒಂದರಂತೆ ಎದುರಾಗುತ್ತಿವೆ. ನಯನತಾರಾ ಮೊದಲೇ ನಿತ್ಯಾಳನ್ನು ಮುಗಿಸಲು ಸಂಚು ರೂಪಿಸಿದ್ದಳು. ಆದರೆ, ಕರ್ಣ ಸಮಯಕ್ಕೆ ಸರಿಯಾಗಿ ಬಂದು ಆಕೆಯನ್ನು ಉಳಿಸಿದ್ದ. ಈ ಘಟನೆಯ ನಂತರವೂ ವಿಲನ್‌ಗಳ ದುಷ್ಕೃತ್ಯಗಳು ನಿಲ್ಲಲಿಲ್ಲ.

ಈಗ ಹೊಸ ಗುರಿಯಾಗಿ ನಿಧಿ ಆಯ್ಕೆಯಾಗಿದ್ದಾಳೆ. ನಿಧಿ ಕಾರಿನಲ್ಲಿ ಕುಳಿತಿದ್ದಾಗ ಕರ್ಣ ಐಸ್‌ಕ್ರೀಮ್‌ ತರಲು ಹೊರಗೆ ಇಳಿದಿದ್ದ. ಅಷ್ಟರಲ್ಲೇ ಲಾರಿಯೊಂದು ಬಂದು ಆ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿಯತೊಡಗಿದ್ದು, ಸುತ್ತಲಿನ ಜನರು ಬೆಚ್ಚಿಬೀಳುವಂತಹ ದೃಶ್ಯ ನಿರ್ಮಾಣವಾಗಿದೆ.

ಈ ದೃಶ್ಯ ಕಂಡ ಕರ್ಣನಿಗೆ ಆಘಾತವಾಗಿದ್ದು, ಕಾರಿನೊಳಗೆ ನಿಧಿ ಸಿಲುಕಿದ್ದಾಳೆ ಎಂಬ ಭಯ ಅವನನ್ನು ಕಾಡಿದೆ. ಒಳಗಿನಿಂದ ಯಾವುದೇ ಶಬ್ದ ಕೇಳಿಸದ ಕಾರಣ ಆತ ತನ್ನ ಪ್ರಾಣವನ್ನೂ ಲೆಕ್ಕಿಸದೇ ಕಾರಿನ ಗಾಜು ಒಡೆಯಲು ಮುಂದಾಗಿದ್ದಾನೆ. ಕೈಗೆ ಗಾಜಿನ ಚೂರುಗಳು ತಗುಲಿದರೂ ಅವನು ನಿಲ್ಲಲಿಲ್ಲ.

ಆದರೆ ಅಷ್ಟರಲ್ಲಿ ಒಂದು ಅಚ್ಚರಿ ನಡೆದಿದೆ. ನಿಧಿ ಈಗಾಗಲೇ ಕಾರಿನಿಂದ ಹೊರಬಂದಿದ್ದಾಳೆ. ಅವಳನ್ನು ನೋಡಿದ ಕ್ಷಣ ಕರ್ಣನ ಕಣ್ಣುಗಳಿಂದ ಕಣ್ಣೀರು ಹರಿದು, ಮಾತೇ ಹೊರಡದೆ ಅವಳನ್ನು ಬಿಗಿಯಾಗಿ ಅಪ್ಪಿಕೊಂಡಿದ್ದಾನೆ. “ನಿನ್ನನ್ನು ಮತ್ತೆ ಕಳೆದುಕೊಳ್ಳುವ ಧೈರ್ಯ ನನಗಿಲ್ಲ” ಎಂಬ ಅವನ ಭಾವನಾತ್ಮಕ ಮಾತುಗಳು ಈ ದೃಶ್ಯಕ್ಕೆ ಇನ್ನಷ್ಟು ತೀವ್ರತೆ ತಂದಿವೆ.

ಈ ಘಟನೆ ಬಳಿಕ ಕರ್ಣ ಮತ್ತು ನಿಧಿಯ ಜೋಡಿಗೆ ಹೊಸ ಆತಂಕ ಶುರುವಾಗಿದೆ. ಪ್ರತಿ ಕ್ಷಣವೂ ಅಪಾಯ ಎದುರಾಗಬಹುದು ಎಂಬ ಭಯ ಅವರಿಬ್ಬರನ್ನೂ ಕಾಡುತ್ತಿದೆ. ಇದರ ನಡುವೆ ಕರ್ಣ ನಿತ್ಯಾಳಿಗೆ ತೋರಿಸುತ್ತಿರುವ ವಿಶೇಷ ಕಾಳಜಿ ತೇಜಸ್‌ಗೆ ಹೊಟ್ಟೆ ಉರಿ ತರಿಸುತ್ತಿರುವುದು ಕಥೆಗೆ ಮತ್ತೊಂದು ತಿರುವು ನೀಡುತ್ತಿದೆ.
ಮುಂದಿನ ಎಪಿಸೋಡ್‌ಗಳಲ್ಲಿ ವಿಲನ್‌ಗಳ ಸಂಚು ಯಾವ ದಿಕ್ಕು ತಾಳುತ್ತದೆ? ಕರ್ಣನ ಜೀವನದಲ್ಲಿ ಯಾರು ಸುರಕ್ಷಿತರು, ಯಾರು ಅಪಾಯದಲ್ಲಿದ್ದಾರೆ? ಈ ಎಲ್ಲ ಪ್ರಶ್ನೆಗಳು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿವೆ.

‘ಕರ್ಣ’ ಸೀರಿಯಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ಥ್ರಿಲ್‌ ಮತ್ತು ಎಮೋಷನ್‌ ತುಂಬಿದ ಕಥಾವಳಿಯನ್ನು ತರಲಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು