ಅಂಕೋಲಾ: ಬೈಕ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಸ್ಕಿಡ್ಡಾಗಿ ಬಿದ್ದು ಗಾಯಗೊಂಡು ಪೊಲೀಸರ ಅತಿಥಿಯಾದ ಕಳ್ಳ

ಬೈಕನ್ನು ಕದ್ದು ಪರಾರಿಯಾಗುತ್ತಿದ್ದ ವೇಳೆ ಕಳ್ಳನೋರ್ವ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡು ಪೊಲೀಸರ ಸೆರೆಯಾದ  ಘಟನೆ ಅಂಕೋಲಾದಲ್ಲಿ ನಡೆದಿದೆ. ಹುಬ್ಬಳ್ಳಿಯ ಮೂಲದ ಮಂಜುನಾಥ ಕುಲಕರಣಿ ಎಂಬಾತ ಬೈ ಕಳ್ಳತನದಲ್ಲಿ ಸಿಕ್ಕಿ ಬಿದ್ದವ ನಾಗಿದ್ದಾನೆ.



ಘಟನೆಯ ವಿವರ:

ಶಿರಕುಳಿ ಯ ನಾರಾಯಣ ಎಂಬಾತ ತನ್ನ ಕೆಲಸದ ನಿಮಿತ್ತ ಬಾಳೇಗುಳಿ ಗೆ ಬಂದಿದ್ದರು. ಬೈಕನ್ನು ನಿಲ್ಲಿಸಿ ತನ್ನ ಸ್ನೇಹಿತನ ಜೊತೆ ಮಾತನಾಡುತ್ತಿರುವಾಗ ಮಂಜುನಾಥ ಎಂಬಾತ ಬೈಕನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದ. ನಂತರ ಮುಂದೆ ಹೋಗುತ್ತಿದ್ದಂತೆ ಅತಿವೇಗದ ಚಾಲನೆಯಿಂದ ಬೈಕ್ ಸ್ಕಿಡ್ ಆಗಿ ಬಿದ್ದಿದೆ.


ಅಲ್ಲಿನ ಸ್ಥಳೀಯರು ಬಿದ್ದು ಗಾಯಗೊಂಡ ಮಂಜುನಾಥನನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದಾಗ ವ್ಯಕ್ತಿ ತನಗೆ ಏನು ಆಗಿಲ್ಲ ತಾನು ಹುಬ್ಬಳ್ಳಿಗೆ ಹೋಗುತ್ತೇನೆ ಎಂದು ಗೋಗರೆದಿದ್ದಾನೆ. ಆದರೂ ತೀವ್ರ ರಕ್ತಸ್ರಾವ ಆದ್ದರಿಂದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಬೈಕನ್ನು ಪೊಲೀಸ್ ಠಾಣೆಗೆ ಒಯ್ದಿದ್ದರು.


ಆನಂತರ ಬೈಕ್ ಕಳೆದುಕೊಂಡ ವ್ಯಕ್ತಿ ನಾರಾಯಣ ನಾಯಕ್ ಅಂಕೋಲಾ ಪೊಲೀಸ್ ಠಾಣೆಗೆ ಹೋಗಿ ಬೈ ಕಳೆದುಹೋದ ಪ್ರಕರಣವನ್ನು ದಾಖಲಿಸಿದ್ದಾರೆ. ಈ ವೇಳೆ ಪೊಲೀಸರು ಬೈಕ್ ನಂಬರನ್ನು ಪರಿಶೀಲಿಸಿದಾಗ ದಂಗಾಗಿದ್ದಾರೆ. ಏಕೆಂದರೆ ಬೈಕ್ ಚಲಾಯಿಸಿ ಸ್ಕಿಡ್ಡಾಗಿ ಬಿದ್ದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಬೈಕ್ ಅದೇ ಆಗಿತ್ತು. ತಕ್ಷಣವೇ ಪೊಲೀಸರು ಮಂಜುನಾಥ ಕುಲಕರ್ಣಿ ಎಂಬಾತನನ್ನು ವಶಪಡಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ಅಂಕೋಲಾ: ಬೈಕ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಸ್ಕಿಡ್ಡಾಗಿ ಬಿದ್ದು ಗಾಯಗೊಂಡು ಪೊಲೀಸರ ಅತಿಥಿಯಾದ ಕಳ್ಳ


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement