ಹೊನ್ನಾವರ: ಮನೆಯ ಸಮೀಪದಲ್ಲಿ ಆಟವಾಡುತ್ತಿದ್ದ ಮಗುವಿನ ಮೈಮೇಲೆ ಕಾಂಕ್ರೀಟ್ ರಿಂಗ್ ಬಿದ್ದು ಮಗು ಸಾವಿಗೀಡಾದ ಘಟನೆ ಹೊನ್ನಾವರದ ಸಾಲಕೂಡ ಗ್ರಾಮದ ಕೆರೆಕೋಣ ಬಳಿ ನಡೆದಿದೆ.
ಮೃತಪಟ್ಟ ಬಾಲಕಿ ಚಿಂತನ ರಾಜು ನಾಯಕ್ ಎನ್ನಲಾಗಿದೆ. ಆರು ವರ್ಷದ ಈ ಬಾಲಕಿ ಉಳಿದ ಮಕ್ಕಳೊಂದಿಗೆ ಮನೆಯತ್ತಿರ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಂಕ್ರೀಟ್ ರಿಂಗ್ ಮೈಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.