Ticker

6/recent/ticker-posts
Responsive Advertisement

ಕುಮಟಾ ತಾಲೂಕಿನ ದೀವಗಿ ವ್ಯಕ್ತಿ ನೇಣಿಗೆ ಶರಣು

ಕುಮಟಾ ತಾಲೂಕಿನ ದಿವಗಿ ಕೆಳಗಿನ ಕೇರಿಯಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರದಂದು ನಡೆದಿದೆ.


ನೇಣಿಗೆ ಶರಣಾದ ವ್ಯಕ್ತಿಯನ್ನು ಪುರಂದರ ಈಶ್ವರ ಅಂಬಿಗ ಎಂದು ಹೇಳಲಾಗಿದೆ. ಈತನು ಸಾಲಮಾಡಿ ಆಟೋ ಬಾಡಿಗೆ ಬಿಟ್ಟಿದ್ದ.  ಯಾವುದೋ ಒಂದು ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಕುಮಟಾ ತಾಲೂಕಿನ ದೀವಗಿ ವ್ಯಕ್ತಿ ನೇಣಿಗೆ ಶರಣು


ಇದನ್ನು ಓದಿ:  ನನ್ನಿಂದ‌ ಕೊರೊನಾ ಹರಡಬಾರದು: ಇಟಲಿಯಲ್ಲೇ ಉಳಿದ ಶಿರಸಿಯ ಕನ್ನಡತಿ


ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕೊಠಡಿಯ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರಾಜೇಶ್ ಈಶ್ವರ ಅಂಬಿಗ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.  ಕುಮಟಾ ಪೊಲೀಸ್ ಠಾಣೆಯ ASI ದತ್ತ ನಾಯಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು