ಕಾರವಾರದ ನಗರವ್ಯಾಪ್ತಿಯಲ್ಲಿ ಮನೆಯಿಂದ ನಾಪತ್ತೆಯಾಗಿರುವ ವ್ಯಕ್ತಿಯೊಬ್ಬನ ಶವ ಶುಕ್ರವಾರದಂದು ಸುಂಕೇರಿ ಬಳಿ ಕಾಳಿ ನದಿಯಲ್ಲಿ ಪತ್ತೆಯಾಗಿದೆ. ಕಾರವಾರ ನಗರದ ಬಾಡ ಶಿವಾಜಿ ವಾಡದ ನಿವಾಸಿ ದೇವಿದಾಸ ರಾಮದಾಸ್ ಶಾನ್ಭಾಗ್ ಇವರೇ ಮತಪಟ್ಟ ದುರ್ದೈವಿ ಯಾಗಿದ್ದಾರೆ.
ಬುಧವಾರ ರಾತ್ರಿಯಂದು ಕಾಣೆಯಾಗಿದ್ದ ಇವರು ಎರಡು ದಿನಗಳ ನಂತರ ಅಂದರೆ ಶುಕ್ರವಾರ ಮೃತ ಸ್ಥಿತಿಯಲ್ಲಿ ದೊರಕಿದ್ದಾರೆ. ಇವರು ಅನೇಕ ವರ್ಷಗಳಿಂದ ಸಕ್ಕರೆ ಕಾಯಿಲೆ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಆರೋಗ್ಯದ ಸಮಸ್ಯೆಯನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಆರಂಭಿಸಲಾಗಿದೆ.