ಹೊನ್ನಾವರ: ಸೊರಬದಿಂದ ಅಂಕೋಲಾಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಸಾವು.

ಸೊರಬದಿಂದ  ತನ್ನ ಊರಾದ ಅಂಕೋಲಕ್ಕೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹೊನ್ನಾವರದ ಮೂಡ್ಕಣಿ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದ ಒಕ್ಕಲು ಕೇರಿಯ ಚೆನ್ನಯ್ಯ ಗೌಡ ಎಂದು ಹೇಳಲಾಗಿದೆ.


ಯಾವುದೋ ಕಾರ್ಯನಿಮಿತ್ತವಾಗಿ ಮಾರ್ಚ್ 2ರಂದು ಇವರು ಶಿವಮೊಗ್ಗ ಜಿಲ್ಲೆಯ ಸೊರಬಕ್ಕೆ ತೆರಳಿದ್ದರು. ಮಾರ್ಚ್ 4 ನೇ ತಾರೀಖಿನಂದು ಸೊರಬದಿಂದ ಹಿಂತಿರುಗಿ ಮನೆಗೆ ಬಸ್ಸಿನಲ್ಲಿ ಮರಳುತ್ತಿದ್ದಾಗ ತೀವ್ರ ಅನಾರೋಗ್ಯದ ಕಾರಣದಿಂದ ಬಸ್ ಹೊನ್ನಾವರದ ಮೂಡ್ಕಣಿ ಸಮೀಪದ ಬಸ್ ನಿಲ್ದಾಣ ತಲುಪಿದಾಗ ಮತಪಟ್ಟಿದ್ದಾರೆ. ಘಟನೆ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾವರ: ಸೊರಬದಿಂದ ಅಂಕೋಲಾಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಸಾವು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement