ನಾಣ್ಯ ಎಸೆಯಬೇಕೆಂದು ವಾಹನ ನಿಲ್ಲಿಸಿ ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ!!!

ನಾಣ್ಯ ಎಸೆಯಬೇಕೆಂದು ವಾಹನ ನಿಲ್ಲಿಸಿ ಹೆತ್ತವರ ಕಣ್ಣೆದುರಲ್ಲೇ ನದಿಗೆ ಜಿಗಿದು ಯುವತಿ ಆತ್ಮಹತ್ಯೆ!!!


ಇಪ್ಪತ್ತರ ವಯಸ್ಸಿನ ಯುವತಿಯೊಬ್ಬರು ಪೋಷಕರ ಎದುರಲ್ಲೇ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ಯುವತಿಯ ಹೆಸರು ಐಶ್ವರ್ಯ ಶ್ರೀಪಾಲ ಕಬ್ಬಿನ ( 20 ವರ್ಷ ವಯಸ್ಸು). ಈಕೆ ಮೂಲತಃ ಧಾರವಾಡದ ನವಲಗುಂದ ಪಟ್ಟಣದ ನಿವಾಸಿಯಾಗಿದ್ದಾರೆ. ಪಾಲಕರ ಜೊತೆ ದೇವಸ್ಥಾನಕ್ಕೆ ಹೋಗಿ ಬಂದು ಮನೆಗೆ ಹೋಗುವ ವೇಳೆ ಈ ದುರ್ಘಟನೆ ನಡೆದಿದೆ.



ವಿಜಯಪುರದ ಆಲಮೇಲ ಮತ್ತು ಕಲಬುರ್ಗಿ ಜಿಲ್ಲೆಯ ಅಫಜಲ್ ತಾಲ್ಲೂಕ್ ನಡುವೆ ಬರುವ ಭೀಮಾನದಿಯ ಹತ್ತಿರ ವಾಹನ ನಿಲ್ಲಿಸಿ ತಾನು ನದಿಗೆ ನಾಣ್ಯವನ್ನು ಎಸೆದು ಬರುವುದಾಗಿ ಪೋಷಕರ ಹತ್ತಿರ ಹೇಳಿದ್ದಾಳೆ. ವಾಹನದಿಂದ ಇಳಿದು ನೇರವಾಗಿ ಭೀಮಾ ನದಿಗೆ ಧುಮುಕಿ ಪೋಷಕರ ಕಣ್ಣೆದುರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement