ಇಂದಿನ ಭವಿಷ್ಯ ಜೂನ್ 25, 2020

Todays horoscope in kannada Todays astrology in kannada



Today astrology in kannada today horoscope in kannada
ಮನೆಗೆ ದುಬಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಪೋಷಕರ ಆರೋಗ್ಯದ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಜವಾಬ್ದಾರಿಯಲ್ಲಿ ಬದಲಾವಣೆ ಆಗಬಹುದು. ಅಥವಾ ಬೇರೆ ಇಲಾಖೆಗೆ ವರ್ಗಾವಣೆ ಆಗಬಹುದು. ಸಂಗಾತಿ ಜತೆಗೆ ಸಣ್ಣ- ಪುಟ್ಟ ಮನಸ್ತಾಪ ಆಗಬಹುದು.



Today astrology in kannada today horoscope in kannada
ಬೇರೆಯವರು ಆಗಲ್ಲ ಎಂದು ಕೈ ಬಿಟ್ಟ ಕೆಲಸವನ್ನು ನೀವು ಮಾಡಿ ತೋರಿಸುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸಾಮರ್ಥ್ಯದ ಬಗ್ಗೆ ಇತರರು ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ಮೃದುವಾದ ಮಾತುಗಳಿಂದ ಕೆಲಸವನ್ನು ತೆಗೆಯುವುದು ಕಷ್ಟ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಆಲೋಚನೆ ವಿಧಾನ ಬದಲಾಯಿಸಿಕೊಳ್ಳಲಿದ್ದೀರಿ.




Today astrology in kannada today horoscope in kannada
ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು, ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುವವರಿಗೆ ಹೊಸ ಸವಾಲುಗಳು ಎದುರಾಗಲಿವೆ. ನಿರೀಕ್ಷಿತ ಆದಾಯ ಬಾರದೆ ಒತ್ತಡಕ್ಕೆ ಕಾರಣ ಆಗಬಹುದು. ನೇರವಾಗಿ ಮಾತನಾಡುತ್ತೇನೆ ಎಂದು ಅಂದುಕೊಂಡರೆ ಎಲ್ಲ ಕಡೆಯೂ ಸಾಧ್ಯವಿಲ್ಲ, ನೆನಪಿಡಿ.





Today astrology in kannada today horoscope in kannada
ಹೊಸ ಉದ್ಯೋಗಕ್ಕೆ ಪ್ರಯತ್ನ ಪಡಲಿದ್ದೀರಿ. ನಿಮ್ಮ ಬಗ್ಗೆ ಅಪಪ್ರಚಾರ ಮಾಡಲು ಹವಣಿಸುವ ಕೆಲವರು ನೆಮ್ಮದಿ ಹಾಳಾಗುವಂತೆ ಮಾಡುತ್ತಾರೆ. ಸಾಲದ ಒತ್ತಡದಿಂದ ಬೇಸರ ಮೂಡುತ್ತದೆ. ಇತರರ ಬೇಜವಾಬ್ದಾರಿಯಿಂದ ನಿಮಗೆ ನಷ್ಟವಾಗುವ ಸಾಧ್ಯತೆ ಇದೆ. ಯಾವ ನಿರ್ಧಾರ ಕೈಗೊಳ್ಳುವಾಗಲೂ ಅನುಭವಿಗಳ ಮಾರ್ಗದರ್ಶನ ಪಡೆಯಿರಿ.




Today astrology in kannada today horoscope in kannada
ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ನಿಮ್ಮ ಸ್ನೇಹಿತರು ಯಾರು, ಶತ್ರುಗಳು ಯಾರು ಎಂಬ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಈ ಹಿಂದೆ ನೀವು ಮಾಡಿದ್ದ ಕೆಲಸದ ಫಲಿತಾಂಶ ಈಗ ದೊರೆಯಲಿದೆ. ಹಲವು ಸವಾಲುಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಸುಲಭವಾಗಿ ದಾಟಿಕೊಳ್ಳುತ್ತೀರಿ.



Today astrology in kannada today horoscope in kannada
ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಇರುವವರಿಗೆ ಲಾಭದ ಪ್ರಮಾಣ ಕಡಿಮೆ ಆಗಲಿದೆ. ಮಕ್ಕಳಿಗೆ ಸೂಕ್ತ ವಿವಾಹ ಸಂಬಂಧಗಳು ಒದಗಿ ಬರಲಿವೆ. ತವರು ಮನೆಯಿಂದ ಆಸ್ತಿ ಬರಬೇಕಿದ್ದಲ್ಲಿ ಬರುವ ಸಾಧ್ಯತೆ ಇದೆ. ಈ ಹಿಂದೆ ನಿಮ್ಮ ಜತೆ ಜಗಳ ಮಾಡಿದ್ದವರು ಈಗ ಸಹಾಯ ಕೇಳಿಕೊಂಡು ಬರುವ ಸಾಧ್ಯತೆ ಇದೆ.





Today astrology in kannada today horoscope in kannada
ದುಡ್ಡಿನ ವಿಚಾರವನ್ನು ವಾಸ್ತವ ನೆಲೆಗಟ್ಟಿನಿಂದಲೇ ನೋಡಬೇಕು. ಭಾವನಾತ್ಮಕವಾಗಿ ಆಲೋಚಿಸಿದರೆ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಭೂಮಿ- ಆಸ್ತಿ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಪ್ರಯತ್ನ ಫಲ ನೀಡಲಿದೆ. ತೀರಾ ಅನಿವಾರ್ಯ ಸಂದರ್ಭದಲ್ಲೂ ಸುಳ್ಳು ಹೇಳಬೇಡಿ. ಹಾಗೆ ಮಾಡಿದರೆ ವರ್ಚಸ್ಸಿಗೆ ಧಕ್ಕೆ ಆಗುತ್ತದೆ.




Today astrology in kannada today horoscope in kannada
ಇಬ್ಬರು ಸ್ನೇಹಿತರ ಜಗಳದ ಮಧ್ಯೆ ನೀವು ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಯಾರ ಪರವಾಗಿಯೂ ನಿಲ್ಲಲಾಗದ ಸ್ಥಿತಿ ನಿರ್ಮಾಣ ಆಗುತ್ತದೆ. ಆದರೆ ನಿಮ್ಮ ಸಮಯ, ನೆಮ್ಮದಿ ಎರಡೂ ಹಾಳಾಗುತ್ತದೆ. ಸಾಧ್ಯವಾದಷ್ಟೂ ಇಂಥ ಸನ್ನಿವೇಶಕ್ಕೆ ಸಿಲುಕಿಕೊಳ್ಳದಂತೆ ಎಚ್ಚರಿಕೆಯಿಂದ ಇರಬೇಕು.





Today astrology in kannada today horoscope in kannada
ಅನಿವಾರ್ಯ ಇಲ್ಲದಿದ್ದಲ್ಲಿ ಈ ದಿನ ಯಾವುದೇ ಹಣದ ವ್ಯವಹಾರ ಮಾಡದಿರುವುದು ಉತ್ತಮ. ಮನೆಯಿಂದ ದೂರದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿಪರೀತ ಖರ್ಚು ಎದುರಾಗಲಿದೆ. ಮನೆ ನಿರ್ಮಾಣ ಕೈಗೊಂಡಿದ್ದಲ್ಲಿ ಸಮಯಕ್ಕೆ ಸರಿಯಾಗಿ ಹಣ ಹೊಂದಿಸಲು ಪರದಾಡುವಂತಾಗುತ್ತದೆ.



Today astrology in kannada today horoscope in kannada
ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ನಡೆಯಲಿದೆ. ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾಗಬಹುದು. ದಲ್ಲಾಳಿ ವೃತ್ತಿಯಲ್ಲಿ ಇರುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ಏಳ್ಗೆ ಇದೆ.



Today astrology in kannada today horoscope in kannada
ಸಂಗಾತಿ- ಮಕ್ಕಳ ಸಲುವಾಗಿ ನಿಮ್ಮ ಆಸೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ದೈಹಿಕ ಆಯಾಸ ಕಾಡಲಿದೆ. ಆಪ್ತರ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪಾಲಿಸಿ. ಈ ಹಿಂದೆ ಯಾರಿಗಾದರೂ ಸಾಲ ಬಾಕಿ ಉಳಿಸಿಕೊಂಡಿದ್ದಲ್ಲಿ ಅದನ್ನು ವಾಪಸ್ ನೀಡುವ ಕಡೆಗೆ ಗಮನ ನೀಡಿ.



Today astrology in kannada today horoscope in kannada
ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಒತ್ತಡದ ಮಧ್ಯೆ ಕೆಲಸ- ಕಾರ್ಯಗಳನ್ನು ಗಡುವಿನೊಳಗೆ ಮುಗಿಸಬೇಕಾಗುತ್ತದೆ. ಸ್ವಂತ ಮನೆ ಇರುವವರಿಗೆ ದುರಸ್ತಿಗಾಗಿ ಖರ್ಚು ಮಾಡಬೇಕಾಗಬಹುದು. ಸಂಬಂಧದಲ್ಲಿ ಗೊಂದಲದ ಸನ್ನಿವೇಶಗಳು ಏರ್ಪಡಬಹುದು. ಸಂಯಮದಿಂದ ಬಗೆಹರಿಸಿಕೊಳ್ಳಿ.



ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ ಇದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ. ಶಿವನ ಆರಾಧನೆ ಮಾಡಿ, ಯಾವುದೇ ಮುಖ್ಯ ಕೆಲಸದಲ್ಲಿ ಮುಂದುವರಿಯಿರಿ. ಸ್ತ್ರೀಯರ ವಿಷಯವಾಗಿ ಹಗುರವಾಗಿ ಮಾತನಾಡಬೇಡಿ. ಕರಿದ ಪದಾರ್ಥಗಳು, ಮಸಾಲೆಯುಕ್ತ ಆಹಾರ ಸೇವನೆ ಮಾಡಬೇಡಿ. ಲೇವಾದೇವಿ ವ್ಯವಹಾರ ಮಾಡುವವರು ಬರಬೇಕಾದ ಹಣಕ್ಕೆ ಪ್ರಯತ್ನಿಸಿ. ಶ್ರಮಪಟ್ಟು ಯತ್ನಿಸಿದರೆ ಬರುವ ಸಾಧ್ಯತೆ ಇದೆ. ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇದೆ. ದೂರದ ಸಂಬಂಧಿಗಳು ಅಥವಾ ಆಪ್ತ ಸ್ನೇಹಿತರು ಮನೆಗೆ ಬರುವ ಸಾಧ್ಯತೆ ಇದೆ. ನಿಮ್ಮಿಂದ ನೆರವು ಕೇಳಬಹುದು. ಸೋದರ ಸಂಬಂಧಿಗಳ ನೆರವಿನಿಂದ ಮುಖ್ಯವಾದ ಕೆಲಸ- ಕಾರ್ಯಗಳನ್ನು ಮಾಡಲಿದ್ದೀರಿ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಗಡುವಿನೊಳಗೆ ಮುಗಿಸಲು ಪ್ರಯತ್ನಿಸಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸಿಗೆ ಹಾನಿ ಆಗಬಹುದು. ನೀವು ವಾಪಸ್ ಮಾಡಬೇಕಾದ ಸಾಲವನ್ನು ಹಿಂತಿರುಗಿಸಲು ಯತ್ನಿಸಿ. ಸಂಭಾವನೆ ಅಥವಾ ಸಂಬಳದ ವಿ‌ಚಾರಕ್ಕೆ ಮನಸ್ತಾಪ ಎದುರಾಗಬಹುದು. ದೂರದ ಸ್ಥಳಕ್ಕೆ, ಬೇಡದ ಜಾಗಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಜತೆ ಮಾತುಕತೆ ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ಸಾಧ್ಯವಾದಷ್ಟೂ ಮೌನದಿಂದ ಇರಬೇಕು, ಸಮಸ್ಯೆಗಳನ್ನು ತಡೆಯಬಹುದು. ನಿಮ್ಮ ಸಾಮರ್ಥ್ಯದ ಪರಿಚಯ ಇತರರಿಗೆ ಆಗಲಿದೆ. ಸ್ವಂತ ಉದ್ಯಮ ಮಾಡುತ್ತಿರುವವರಿಗೆ ಏಳ್ಗೆ ಹಾಗೂ ಪ್ರಗತಿ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಅದಕ್ಕಾಗಿ ಹಣಕಾಸು ಕೂಡ ಅಗತ್ಯ ಪ್ರಮಾಣದಲ್ಲಿ ಹೊಂದಾಣಿಕೆ ಆಗಲಿದೆ. ಅನಿರೀಕ್ಷಿತವಾದ ಧನಾಗಮ ಇದೆ. ವಾಹನ ಸಾಲಕ್ಕೆ ಪ್ರಯತ್ನಿಸುತ್ತಿರುವವರಿಗೆ ಬ್ಯಾಂಕ್ ವ್ಯವಹಾರಗಳು ಸಲೀಸಾಗಿ ಆಗಲಿವೆ. ಆಪ್ತರ ಜತೆಗೆ ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ಆಗಬಹುದು. ನಿರಂತರವಾದ ಪ್ರಯತ್ನದಿಂದ ಸಾಕಷ್ಟು ಕೆಲಸಗಳನ್ನು ಮಾಡಲಿದ್ದೀರಿ. ಸಂಗಾತಿ- ಮಕ್ಕಳ ಸಲಹೆಗಳನ್ನು ಕೇಳಿಸಿಕೊಂಡು, ಪಾಲಿಸಿ. ಲೆಕ್ಕಾಚಾರದ ನಡೆಗಳು ಫಲ ನೀಡುತ್ತವೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವೇತನ ಹೆಚ್ಚಳ, ಬಡ್ತಿ ಬಗ್ಗೆ ಸುದ್ದಿ ಕೇಳಿಬರಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಿದ್ದು, ಹೊಸ ವಸ್ತ್ರಾಭರಣ ಖರೀದಿ ಯೋಗ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸ್ನೇಹಿತರು, ಸಂಬಂಧಿಗಳಿಂದ ಸಲಹೆ- ಮಾರ್ಗದರ್ಶನ ದೊರೆಯಲಿದೆ. ನಿಮ್ಮ ಸಹೋದ್ಯೋಗಿಗಳ ಜತೆಗೆ ಸ್ನೇಹದಿಂದ ವರ್ತಿಸಿ. ಅವರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸಿ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಪರೀತ ಕೆಲಸ ಇರುತ್ತದೆ. ಕಂಡೂ ಕಂಡು ಮೋಸ ಹೋಗುವ ಸಾಧ್ಯತೆಗಳು ಇವೆ. ಆದ್ದರಿಂದ ಹೆಚ್ಚಿನ ಬಡ್ಡಿ ಆಸೆಗೆ ಹಣ ನೀಡಬೇಡಿ. ವಂಚಕರ ನಯವಾದ ಮಾತುಗಳಿಗೆ ಬಲಿ ಬೀಳಬೇಡಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಸರಳ ಸಂಗತಿಗಳು ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ. ಸ್ವಂತ ಮನೆ ಕಟ್ಟಬೇಕು ಎಂದಿರುವವರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಹೀಗೆ ಎಂದು ತೀರ್ಮಾನ ಮಾಡುವುದಕ್ಕೆ ನಾನಾ ಬಗೆಯಲ್ಲಿ ಸವಾಲುಗಳು ಎದುರಾಗಲಿವೆ. ಉದ್ಯೋಗ ವಿಚಾರದಲ್ಲಿ ಅಂದುಕೊಂಡಂಥ ಫಲಿತಾಂಶ ಸಿಗುವುದಿಲ್ಲ. ನೇರವಂತಿಕೆ ಕಾರಣಕ್ಕೆ ಬೇರೆಯವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಸ್ವಾತಂತ್ರ್ಯವನ್ನು ಅನುಭವಿಸಲಿದ್ದೀರಿ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡ ಹೆಚ್ಚಾಗಲಿದೆ. ಕ್ಷುಲ್ಲಕ ಸಂಗತಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಇದರಿಂದ ಮನಸ್ತಾಪ ಆಗಬಹುದು. ಅದಕ್ಕೆ ಅವಕಾಶ ನೀಡಬೇಡಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ ಇದೆ. ನೀವಾಗಿ ಮುಂದಕ್ಕೆ ಹೆಜ್ಜೆ ಇಟ್ಟು, ಮುಖ್ಯ ಕೆಲಸಗಳನ್ನು ಮಾಡಲಿದ್ದೀರಿ. ಶುಭ ಕಾರ್ಯಗಳನ್ನು ನಡೆಸಲು ಉಳಿತಾಯದ ಹಣವನ್ನು ತೆಗೆಯಬೇಕಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.




ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement