ಸಾಲಗಾರರಿಂದ ಒತ್ತಡ ಹೆಚ್ಚಾಗಬಹುದು. ಆದಾಯದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಾಣುತ್ತದೆ. ನೀವು ಎಂದೋ ಆಡಿದ್ದ ಮಾತನ್ನು ಈಗ ನೆನಪಿಸಿ, ಚುಚ್ಚು ಮಾತುಗಳನ್ನು ಆಡುತ್ತಾರೆ. ವೈಯಕ್ತಿಕವಾಗಿ ನೀವಾಗಿಯೇ ತೆಗೆದುಕೊಂಡ ಜವಾಬ್ದಾರಿಗಳನ್ನು ಪೂರೈಸುವುದು ಕಷ್ಟವಾಗುತ್ತದೆ.
ನಿಮಗೇ ಅಚ್ಚರಿಯಾಗುವಂತೆ ಪ್ರಭಾವಿಗಳಾಗುತ್ತೀರಿ. ನೀವು ಆಡುವ ಮಾತಿಗೆ ಗೌರವ- ಮನ್ನಣೆ ದೊರೆಯಲಿದೆ. ಸ್ವಂತ ಹಣದಲ್ಲಿ ದಾನ- ಧರ್ಮಾದಿ ಕಾರ್ಯಗಳನ್ನು ಮಾಡಲಿದ್ದೀರಿ. ವಾಹನ ಖರೀದಿ, ಮನೆ ದುರಸ್ತಿಗೆ ಅಂತ ಹಣ ಹೊಂದಿಸಿಟ್ಟಿದ್ದರೆ ಅದು ಬೇರೆ ಉದ್ದೇಶಗಳಿಗೆ ಖರ್ಚಾಗಲಿದೆ.
ನಿಮ್ಮ ಯೋಜನೆಗಳಿಗೆ ಇತರರು ಆಸಕ್ತಿ ತೋರುತ್ತಿಲ್ಲ ಎಂಬ ಭಾವನೆ ವಿಪರೀತ ಕಾಡುತ್ತದೆ. ಅದನ್ನು ಹೇಳಿಕೊಳ್ಳಲಾಗದೆ, ಹಾಗೇ ಸುಮ್ಮನಿರುವುದಕ್ಕೂ ಆಗದೆ ಮಾನಸಿಕ ತೊಳಲಾಟ ಅನುಭವಿಸುತ್ತೀರಿ. ನೀವಾಡಿದ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಆಪ್ತರೇ ಜಗಳವಾಡುವ ಸಾಧ್ಯತೆಗಳಿವೆ.
ಇತರರ ಬಗ್ಗೆ ದೂರನ್ನು ಹೇಳಬೇಡಿ. ನಿಮ್ಮ ಆಲೋಚನೆ, ಕೆಲಸ ಸರಿಯಿದೆ ಅಂತ ನಿಮಗೆ ಗೊತ್ತಿದ್ದರೂ ಅದನ್ನು ಮುಂದಿಟ್ಟುಕೊಂಡು, ಇತರರ ಮೇಲೆ ಆಕ್ಷೇಪ ಹೇಳುವುದಕ್ಕೋ ದೂರುವುದಕ್ಕೋ ಹೋಗಬೇಡಿ. ಸಾಂಸಾರಿಕವಾಗಿ ಸಣ್ಣ-ಪುಟ್ಟ ಮನಸ್ತಾಪಗಳು ತಲೆದೋರಬಹುದು.
ಕರಿದ ಅಥವಾ ಮಸಾಲೆ ಪದಾರ್ಥಗಳ ಸೇವನೆಯನ್ನು ಮಾಡಬೇಡಿ. ಇನ್ನು ನೀರು ಸೇವನೆ ಬಗ್ಗೆಯೂ ಗಮನ ಇರಲಿ. ಸ್ವಚ್ಛತೆ ಕಾಪಾಡಿಕೊಳ್ಳದೆ ಆರೋಗ್ಯ ಸಮಸ್ಯೆ ಎದುರಾಗುವ ಸಾಧ್ಯತೆ ಕಾಣುತ್ತಿದೆ. ಆಪ್ತರ ಹಣಕಾಸಿನ ಸಮಸ್ಯೆಗಳನ್ನು ನೀವು ಬಗೆಹರಿಸಲಿದ್ದೀರಿ. ಪ್ರೇಮಿಗಳಿಗೆ ಉತ್ತಮವಾದ ದಿನ.
ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ದೇವತಾರಾಧನೆ, ದಾನ- ಧರ್ಮಾದಿಗಳಲ್ಲಿ ತೊಡಗಿಕೊಳ್ಳುತ್ತೀರಿ. ನಿಮ್ಮ ಕೆಲಸದ ಅಚ್ಚುಕಟ್ಟುತನವನ್ನು ಇತರರು ಬಹಳವಾಗಿ ಮೆಚ್ಚುತ್ತಾರೆ. ಇತರರಿಗೆ ಮಾತು ನೀಡುವಾಗ ಎಚ್ಚರದಿಂದ ಇರಿ. ನಿಮ್ಮಿಂದ ಸಾಧ್ಯವಾಗದ ಭರವಸೆಗಳನ್ನು ನೀಡಬೇಡಿ.
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಪೋಸ್ಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಅನಗತ್ಯವಾದ ವಾದ- ವಿವಾದಕ್ಕೆ ಕಾರಣ ಆಗಬಹುದು. ನಿಮಗೆ ಸಂಬಂಧಿಸದ ವಿಷಯಗಳಲ್ಲಿ ಅನಗತ್ಯವಾಗಿ ಮೂಗು ತೂರಿಸಬೇಡಿ. ಅವಮಾನದ ಪಾಲಾಗುತ್ತೀರಿ, ಎಚ್ಚರ.
ನಿಮ್ಮ ಮೇಲಿನ ಹಳೇ ದ್ವೇಷವನ್ನು ತೀರಿಸಿಕೊಳ್ಳಲು ಹವಣಿಸುತ್ತಿರುವವರಿಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಮುಖ್ಯವಾದ ದಾಖಲೆ- ಪತ್ರಗಳನ್ನು ಜೋಪಾನವಾಗಿಡಿ. ಸಾಕ್ಷ್ಯಾಧಾರ ಇಲ್ಲದೆ ಯಾವುದೇ ಆರೋಪ ಮಾಡಬೇಡಿ. ಹಣದ ಖರ್ಚಿನ ಮೇಲೆ ಹೆಚ್ಚಿನ ನಿಗಾ ಇಡಬೇಕು.
ಧಾರ್ಮಿಕ ಚಿಂತನೆಗಳನ್ನು ಮಾಡಲಿದ್ದೀರಿ. ಅದಕ್ಕೆ ಪೂರಕವಾಗಿ ಮನೆಯಲ್ಲಿ ವಾತಾವರಣ ಸೃಷ್ಟಿಯಾಗಲಿದೆ. ನಿಮಗಿಂತ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ನೆರವು ಮಾಡಲಿದ್ದೀರಿ. ಸಮಾಧಾನಕರವಾದ ಮನಸ್ಥಿತಿ ನಿಮ್ಮದಾಗಿರುತ್ತದೆ. ಮಕ್ಕಳ ನಡವಳಿಕೆಯಿಂದ ತುಸು ಬೇಸರವಾಗುತ್ತದೆ.
ಈ ಹಿಂದೆ ನಡೆದ ಕೆಲವು ಘಟನೆಗಳನ್ನು ಆತ್ಮಾವಲೋಕನ ಮಾಡಿಕೊಳ್ಳಲಿದ್ದೀರಿ. ಸಂಗಾತಿಯ ಮೇಲೆ ನಿಮಗಿದ್ದ ಕೋಪ- ತಾಪವು ಕರಗುತ್ತದೆ. ಮನೆಯ ಖರ್ಚು ನಿರೀಕ್ಷೆಗಿಂತ ಹೆಚ್ಚಾಗುತ್ತದೆ. ನಿರೀಕ್ಷಿತ ಆದಾಯ ಮೂಲದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಯಾರ ಜತೆಗೂ ಹಂಚಿಕೊಳ್ಳಲಾಗದ ಧರ್ಮ ಸಂಕಟವೊಂದಕ್ಕೆ ಸಿಲುಕಿಕೊಳ್ಳುತ್ತೀರಿ.
ನಿಮ್ಮನ್ನು ವಿಮರ್ಶೆ ಮಾಡಿದ್ದನ್ನೇ ತಪ್ಪು ಎಂಬ ಭಾವನೆಯಿಂದ ಹೊರಗೆ ಬನ್ನಿ. ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಂಡು ಮುಂದುವರಿಯುವುದರ ಬಗ್ಗೆ ಆಲೋಚನೆ ಮಾಡಿ. ಎಲ್ಲಕ್ಕೂ ದುಡ್ಡು ಪರಿಹಾರ ಎಂದುಕೊಳ್ಳುವ ಸ್ವಭಾವದಿಂದ ಹೊರಗೆ ಬನ್ನಿ. ಸಮಯಕ್ಕೆ ಜನ ಬಲ ಇಲ್ಲದಿದ್ದಲ್ಲಿ ಕಷ್ಟ ಎಂಬುದನ್ನು ತಿಳಿದುಕೊಳ್ಳಿ.
ಯಾವುದೇ ಕೆಲಸವಾಗಲಿ ಜಬರ್ದಸ್ತಿನಿಂದ ಮಾಡಿಸಿಕೊಳ್ಳಬಲ್ಲೆ ಎಂಬ ಮನಸ್ತತ್ವವನ್ನು ಬದಲಿಸಿಕೊಳ್ಳಬೇಕಾದ ದಿನ ಇದು. ಯಾರು ಏನೇ ಹೇಳಿದರೂ ನಿಮ್ಮ ಮೂಲ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಡಿ. ನಿಶ್ಚಿತ ಆದಾಯದಲ್ಲಿ ಏರುಪೇರಾಗಲಿದೆ. ಆದರೆ ಈ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ.
ಕೃಪೆ: kannada.oneindia.com
Tags:
ದಿನ ಭವಿಷ್ಯ