ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಕೆಲವು ಕೆಲಸಗಳನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವುದು ಉತ್ತಮ. ಲಾಭ- ನಷ್ಟದ ಲೆಕ್ಕಾಚಾರವನ್ನು ಕಾಗದದ ಮೇಲೆ ಹಾಕಿದ ನಂತರವಷ್ಟೇ ಯಾವುದೇ ವ್ಯಾಪಾರ ವಿಸ್ತರಣೆಗೆ ಸಮ್ಮತಿಯನ್ನು ನೀಡಿ. ಮಾಹಿತಿ ಕೊರತೆಯಿದ್ದಲ್ಲಿ ಆ ಬಗ್ಗೆ ಮಾತನಾಡದೇ ಇರುವುದು ಉತ್ತಮ.
ಈ ದಿನ ಸಣ್ಣಪುಟ್ಟ ಗಾಯವಾಗುವ ಅಪಾಯ ಇದೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ, ಚೂಪಾದ ವಸ್ತುಗಳನ್ನು ಬಳಸುವಾಗ ಹಾಗೂ ಬೆಂಕಿಯ ಮುಂದೆ ಕೆಲಸ ಮಾಡುವಾಗ ಬಹಳ ಹುಷಾರಾಗಿ ಇರಬೇಕು. ಇನ್ನು ನಿರೀಕ್ಷಿತ ಖರ್ಚುಗಳು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಬಹುದು.
ನಿಮ್ಮ ನಾಯಕತ್ವ ಗುಣವನ್ನು ಸಹೋದ್ಯೋಗಿಗಳು ಮೆಚ್ಚಿಕೊಳ್ಳುತ್ತಾರೆ. ಯಾರದೋ ತಪ್ಪು ನಿರ್ಧಾರವನ್ನು ಸರಿಪಡಿಸುವುದಕ್ಕಾಗಿ ಬಹಳ ಸಮಯವನ್ನು ಮೀಸಲಿಡುತ್ತಾರೆ. ದೇವರ ಸ್ಮರಣೆ, ಅಧ್ಯಾತ್ಮ ಚಿಂತನೆಯಿಂದಾಗಿ ಮಾನಸಿಕ ಸ್ಥೈರ್ಯ ಹೆಚ್ಚಾಗಲಿದೆ. ಆತ್ಮವಿಶ್ವಾಸ ಕೂಡ ಈ ಸಮಯದಲ್ಲಿ ಹೆಚ್ಚುತ್ತದೆ.
ಬೇರೆಯವರ ತಪ್ಪನ್ನು ಕಂಡುಹಿಡಿಯುವುದಕ್ಕೆ ಅಂತಲೇ ಹೆಚ್ಚು ಸಮಯ ಮೀಸಲಿಡುತ್ತೀರಿ. ಕೆಲಸ- ಕಾರ್ಯಗಳು ಅಂದುಕೊಂಡ ವೇಗದಲ್ಲಿ ಪೂರ್ತಿ ಆಗುವುದಿಲ್ಲ. ಈ ಹಿಂದೆ ಪಡೆದಂಥ ಸಾಲವನ್ನು ಕೂಡಲೇ ವಾಪಸ್ ಮಾಡುವಂತೆ ಒತ್ತಡ ಹೇರಬಹುದು. ಉದ್ಯೋಗ ವಿಚಾರದಲ್ಲಿ ವಾಗ್ವಾದ ಮಾಡಿಕೊಳ್ಳಬೇಡಿ.
ಬಂಧು- ಸ್ನೇಹಿತ ವರ್ಗದಲ್ಲಿ ನಿಮ್ಮ ಬಗ್ಗೆ ಅಸಮಾಧಾನ ಸೃಷ್ಟಿ ಆಗಬಹುದು. ನಿಮ್ಮ ಉದ್ದೇಶವನ್ನು ತಿಳಿಸುವುದರಲ್ಲೇ ಬಹಳ ಸಮಯ ವ್ಯರ್ಥ ಆಗುತ್ತದೆ. ಗುರು- ಹಿರಿಯರು, ದೈವಾನುಗ್ರಹ ನಿಮ್ಮ ಪಾಲಿಗೆ ಇರುವುದರಿಂದ ಸವಾಲುಗಳನ್ನು ದಾಟುವಲ್ಲಿ ಸಫಲರಾಗುತ್ತೀರಿ. ಧೈರ್ಯಗೆಡುವ ಅಗತ್ಯ ಇಲ್ಲ.
ವೃತ್ತಿಪರರಿಗೆ ಅನಿರೀಕ್ಷಿತವಾದ ಧನಾಗಮ ಇದೆ. ಸಾಲ ಮಾಡಿಯಾದರೂ ಸರಿ, ಕೈಯಲ್ಲಿ ಹಣ ಓಡಾಡುವಂಥ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಖರ್ಚಿನ ಪ್ರಮಾಣ ಹೆಚ್ಚಾಗಲಿದೆ. ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಸಂಗಾತಿ- ಮಕ್ಕಳ ಅನುಕೂಲಕ್ಕಾಗಿ ನೀವು ಕೆಲವು ತ್ಯಾಗ ಮಾಡಬೇಕಾಗುತ್ತದೆ. ದೀರ್ಘ ಕಾಲದ ಸಾಂಸಾರಿಕ ಸಮಸ್ಯೆಗಳಿಗೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುತ್ತೀರಿ. ವಿವಿಧ ವಲಯಗಳಲ್ಲಿ ಕಾರ್ಯ ನಿರ್ವಹಿಸುವ ಬಂಧುಗಳು- ಸ್ನೇಹಿತರು ನಿಮ್ಮ ನೆರವಿಗಾಗಿ ಕೇಳಿಕೊಳ್ಳಬಹುದು.
ಬದಲಾವಣೆಯ ಹಂತದಲ್ಲಿ ಇರುವವರು ದೊಡ್ಡ ಹೆಜ್ಜೆಗಳನ್ನು ಇಡಬೇಡಿ. ಲೆಕ್ಕಾಚಾರದ ರಿಸ್ಕ್ ಗಳನ್ನು ಮಾತ್ರ ತೆಗೆದುಕೊಳ್ಳಿ. ಸಂಬಂಧದಲ್ಲಿ ಯಾವುದೇ ವ್ಯವಹಾರ ಮಾಡಬೇಡಿ. ಹಾಗೊಂದು ವೇಳೆ ಮಾಡಿದರೆ ಅದು ಜಗಳ- ಕಲಹದಲ್ಲಿ ಕೊನೆಯಾಗಬಹುದು. ಮಹಾವಿಷ್ಣುವಿನ ಧ್ಯಾನ ಮಾಡಿ.
ನೇರವಂತಿಕೆಯಿಂದ ಇರಬೇಕು ಎಂಬ ಪ್ರಯತ್ನದಲ್ಲಿ ಮೇಲಧಿಕಾರಿಗಳ ಜತೆಗೆ ವಾದ- ವಿವಾದ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ವಹಿಸಿದ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿ. ಯಾವುದೇ ಸಬೂಬು ಹೇಳುವುದಕ್ಕೆ ಪ್ರಯತ್ನಿಸಬೇಡಿ. ಹಿತಶತ್ರುಗಳಿಂದ ದೂರವಿರಬೇಕು.
ಸಾಧ್ಯವಾದಷ್ಟೂ ಈ ದಿನ ಮೌನವಾಗಿರಿ. ನಿಮಗೆ ಗೊತ್ತಿರುವ ಸಂಗತಿಗಳೇ ಆದರೂ ಆ ಬಗ್ಗೆ ಮಾತನಾಡುವ ಮುನ್ನ ಒಂದಕ್ಕೆರಡು ಬಾರಿ ಮಾಹಿತಿಯನ್ನು ಪರೀಕ್ಷಿಸಿಕೊಳ್ಳಿ. ಯಾವುದೇ ಕಾರಣಕ್ಕೆ ಆತ್ಮವಿಶ್ವಾಸ ಕಡಿಮೆ ಆಗದಿರುವಂತೆ ಎಚ್ಚರಿಕೆ ತೆಗೆದುಕೊಳ್ಳಿ. ಅನಾರೋಗ್ಯ ಸಮಸ್ಯೆ ಇರುವವರು ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲಿಸಿ.
ಯಾವುದೇ ಕೆಲಸವನ್ನಾದರೂ ಎರಡೆರಡು ಬಾರಿ ಮಾಡುವಂಥ ಸ್ಥಿತಿ ಎದುರಾಗುತ್ತದೆ. ಉಳಿತಾಯ ಮಾಡಿದ್ದ ಹಣ ಕೈ ಸೇರುತ್ತದೆ. ಆದನ್ನು ಹೇಗೆ ವಿತರಣೆ ಮಾಡಬೇಕು ಎಂಬ ಬಗ್ಗೆ ಸರಿಯಾದ ಲೆಕ್ಕಾಚರವನ್ನು ಇಟ್ಟುಕೊಳ್ಳಿ. ಆಪ್ತರು ದಿಢೀರನೇ ನಡವಳಿಕೆ ಬದಲಾಯಿಸಿದರು ಎಂದು ಆತಂಕಕ್ಕೆ ಒಳಗಾಗಬೇಡಿ. ಇದು ತಾತ್ಕಾಲಿಕ.
ರುಚಿಕಟ್ಟಾದ ಊಟ, ಸಂಗಾತಿ ಜತೆಗೆ ಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ನಿಮ್ಮ ಪಾಲಿಗೆ ಇದೆ. ಸಂಗೀತ, ಕಲೆ ಇತ್ಯಾದಿಗಳಲ್ಲಿ ಆಸಕ್ತಿ ಇರುವವರಿಗೆ ಗೌರವ, ಮನ್ನಣೆ ಹಾಗೂ ಬದಲಾವಣೆಯನ್ನು ಕಾಣುವ ಸಮಯ ಇದು. ಸರ್ಕಾರದ ಮಟ್ಟದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರಿಗೆ ವರ್ಗಾವಣೆ ಅಥವಾ ಬೇರೆ ಸ್ಥಳಕ್ಕೆ ನಿಯೋಜನೆ ಮಾಡುವ ಸಾಧ್ಯತೆ ಇದೆ.
Tags:
ದಿನ ಭವಿಷ್ಯ