ಇಸ್ಪೀಟ್ ಅನ್ನೋ ಜೂಜಾಟದಲ್ಲಿ ಲಕ್ಷ ಲಕ್ಷ ರೂಪಾಯಿಗಳನ್ನು ಕಳೆದುಕೊಂಡು ಬರ್ಬಾದ್ ಆದವರನ್ನು ನಾವು ನೋಡಿದ್ದೇವೆ. ಈ ಜೂಜಾಟದಲ್ಲಿ ಕೋಟಿ ಕೋಟಿ ಗಳಿಸಿದ ವರಿಗಿಂತ ಕಳೆದುಕೊಂಡವರೇ ಜಾಸ್ತಿ. ಆದರೆ ಇಲ್ಲೊಬ್ಬ ಆಸಾಮಿ ತಾನು ಇಸ್ಪೀಟ್ ಇನ್ನಿತರ ಜೂಜಾಟ ಗಳನ್ನು ಆಡಿ ಗಳಿಸಿದ ಕೋಟ್ಯಾಂತರ ರೂಪಾಯಿಗಳನ್ನು ಮರಳಿ ಅದನ್ನು ಸೋತವರಿಗೆ ನೀಡಲು ಮುಂದಾಗಿದ್ದಾನೆ. ಮೂಲತಹ ಈ ಅಪರೂಪದ ವ್ಯಕ್ತಿ ಆಂಧ್ರಪ್ರದೇಶ ರಾಜ್ಯದವನಾಗಿದ್ದಾನೆ.
ಆಂಧ್ರಪ್ರದೇಶದ ಮೂಲದ ಮದನಪಲ್ಲಿ ಎಂಬ ಹಳ್ಳಿಯ 24 ವರ್ಷ ವಯಸ್ಸಿನ ಬಾವಾಜಿ ಎಂಬಾತ ತಾನು ಜೂಜಾಟದಲ್ಲಿ ಎರಡು ಕೋಟಿಯನ್ನು ಸಂಪಾದಿಸಿದ್ದೇನೆ ಅಂತ ಹೇಳಿಕೊಂಡಿದ್ದಾನೆ. ಆದರೆ ಈಗ ಆತ ತಾನು ಜೂಜಾಟ ಮಾಡಿ ಗಳಿಸಿದ ಎಲ್ಲ ಹಣವನ್ನು ಮತ್ತು ತನ್ನ ದೇಹದ ಅಂಗಾಂಗಗಳನ್ನು ದಾನ ಮಾಡುತ್ತೇನೆ ಎಂದು ಸ್ಥಳೀಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅವರ ಹತ್ತಿರ ಹೇಳಿದ್ದಾರೆ. ಈತ ತನ್ನ ಹಣದ ಜೊತೆ ಕಣ್ಣು ಕಿಡ್ನಿ ಮತ್ತು ದೇಹದ ಇತರ ಭಾಗಗಳನ್ನು ದಾನ ಮಾಡುವುದಾಗಿ ಡಿಸಿ ಕೀರ್ತಿ ಅವರ ಬಳಿ ಹೇಳಿಕೊಂಡಿದ್ದಾನೆ.
ತನ್ನ ಬಳಿ ಬಂದ ಯುವಕನಿಗೆ ಡಿಸಿಯವರು ಇನ್ನಾದರೂ ಉತ್ತಮ ರೀತಿಯಲ್ಲಿ ಜೀವನವನ್ನು ನಡೆಸು ಅಂತ ಹೇಳಿ ಕಳುಹಿಸಿದ್ದಾರೆ. ಬಾವಾಜಿ ಆರನೇ ತರಗತಿಯ ತನಕ ಓದಿದ್ದಾನೆ ಮತ್ತು ಅವನು ತನ್ನ 12ನೇ ವರ್ಷಕ್ಕೆ ಜೂಜಾಟ ಆಡಲು ಪ್ರಾರಂಭಿಸಿದ್ದಾನೆ. ಸ್ಥಳೀಯ ಜನರ ಪ್ರಕಾರ ಈತ ಜೂಜಾಟದಲ್ಲಿ ಎಷ್ಟು ನಿಪುಣನಾಗಿದ್ದ ಎಂದರೆ ಕೈನಲ್ಲಿ ಮುಟ್ಟಿದ ಕೂಡ್ಲೇ ಇಂಥದ್ದೇ ಕಾರ್ಡ್ ಅಂತಾ ಹೇಳುತ್ತಿದ್ದನಂತೆ. ಈತನ ಈ ಇಸ್ಫೀಟ್ ಕಲೆಗೆ ಸ್ಥಳೀಯರೆಲ್ಲಾ ಬೆರಗಾಗಿದ್ದರಂತೆ.
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಇಂದು ಸಂಜೆಯ ವೇಳೆಗೆ ಗುಡುಗು ಮತ್ತು ಸಿಡಿಲಿನ ಸಹಿತ ಭಾರೀ ಗಾಳಿ ಮತ್ತು ಮಳೆಯಾಗಿದೆ. ಇಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ವರುಣನ ಅಬ್ಬರದಿಂದಾಗಿ ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮಕ್ಕಳ ವಾರ್ಡ್ ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಅವಘಡ ಸಂಭವಿಸಿ ಭಾರೀ ಅನಾಹುತ ತಪ್ಪಿದೆ. ಯಾರಿಗೂ ಯಾವುದೇ ರೀತಿಯ ಅನಾಹುತ ಆಗಲಿಲ್ಲ.
ದೈವಕೃಪೆಯಿಂದ ಇಂದು ನಡೆದ ಘಟನೆಯಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿಲ್ಲ. ಎಲ್ಲಾ 33 ಕಂದಮ್ಮಗಳು ಸುರಕ್ಷಿತವಾಗಿದ್ದಾರೆ. ಮಳೆ ಮತ್ತು ಗುಡುಗಿನ ಆರ್ಭಟ ಕಮ್ಮಿ ಆಗುತ್ತಿದ್ದಂತೆಯೇ ಇಲ್ಲಿ ನ ಆಸ್ಪತ್ರೆಯಲ್ಲಿನ ಮಕ್ಕಳು ಹಾಗೂ ಬಾಣಂತಿಯರನ್ನು ನಗರದ ಸರ್ಜಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಈ ಅವಗಡದ ಕುರಿತು ಮಾಹಿತಿ ಸಿಗುತ್ತಿದ್ದಂತೆಯೇ ಆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬಾರಿ ಅನಾಹುತವಾಗುವ ಘಟನೆಯೊಂದು ತಪ್ಪಿದಂತಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲವನ್ನೂ ಪರಿಶೀಲನೆ ಮಾಡಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯೆಯನ್ನು ನೀಡಿದ ಸಚಿವರು ಎಲ್ಲಾ 33 ಮಕ್ಕಳು ಹಾಗೂ ಬಾಣಂತಿಯರು ಈಗಾಗಲೇ ಸುರಕ್ಷಿತರಾಗಿದ್ದಾರೆ ಮತ್ತು ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಆದರೆ ಈ ಘಟನೆಯಲ್ಲಿ ಮೂವರು ಮಕ್ಕಳಿಗೆ ಸ್ವಲ್ಪ ಉಸಿರಾಟದ ತೊಂದರೆ ಉಂಟಾಗಿದ್ದು ಅದು ವೈದ್ಯರ ಗಮನಕ್ಕೆ ಬಂದಿದೆ ಮತ್ತು ಅವರು ಈಗಾಗಲೇ ಚಿಕಿತ್ಸೆ ನಡೆಸಿದ್ದಾರೆ.
ಬೆಳಗಾವಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಮ್ಮ ಸ್ವಗ್ರಾಮಕ್ಕೆ ತೆರಳಲು ಸಾಧ್ಯವಾಗದೇ ಬಾಣಂತಿ ಮತ್ತು ಆಕೆಯ ತಾಯಿ ಕಣ್ಣೀರು ಹಾಕಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.
ಶನಿವಾರ ಬಾಣಂತಿಯನ್ನು ಜಿಲ್ಲಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ನಿವಾಸಿ ಗೀತಾ ಎಂಬುವವರು ತನ್ನ ಮಗು, ತಂದೆ ತಾಯಿ ಜೊತೆ ಊರಿಗೆ ಹೋಗಲು ಪರದಾಡುತ್ತಿದ್ದರು. ಕರ್ನಾಟಕದಲ್ಲಿ ಲಾಕ್ಡೌನ್ ಪರಿಸ್ಥಿತಿ ಇದ್ದಿದ್ದರಿಂದ ಯಾವುದೇ ವಾಹನ ಸಿಗದೇ ಊರಿಗೆ ಹೋಗಲಾಗದೆ ಬಾಣಂತಿ ತಾಯಿ ಕಣ್ಣೀರು ಹಾಕಿದ್ದರು. ಇಂದು ಸಹ ಯಾವುದೇ ವಾಹನ ಸಿಗದೇ ಸಹಾಯಕ್ಕಾಗಿ ಆ ಕುಟುಂಬದವರು ಬೆಳಗಾವಿ ನಗರದ ಮಾರ್ಕೆಟ್ ಠಾಣೆಯ ಎದುರುಗಡೆ ಯಾವುದಾದರೂ ಸಹಾಯಕ್ಕಾಗಿ ಎದುರುನೋಡುತ್ತಾ ಕುಳಿತ್ತಿದ್ದರು.
ಸ್ಥಳೀಯ ಸಮಾಜ ಸೇವಕ ಸುರೇಂದ್ರ ಎಂಬುವವರು ಅನಗೋಳಕರ್ ಠಾಣೆಯ ಮುಂದೆ ಕುಳಿತಿದ್ದ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ನೆರವಾಗಿದ್ದಾರೆ. ಸುರೇಂದ್ರ ತಮ್ಮ ಸ್ವಂತ ವಾಹನದಲ್ಲಿ ಗರ್ಭಿಣಿ ಮಹಿಳೆಯ ಕುಟುಂಬದ ಎಲ್ಲರನ್ನು ಗೋಕಾಕ್ ಪಟ್ಟಣಕ್ಕೆ ಕರೆದುಕೊಂಡು ಹೋಗುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಬೆಳಗಾವಿ: ದೆಹಲಿ ಜಮಾತ್ ನಿಂದ ಬಂದಿದ್ದವರು ನಮಗೆ ಕೊರೊನಾ ವೈರಸ್ ಬಂದಿದೆ ಎಂದು ಬೆಳಗಾವಿ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಿಂದ ಈಗಾಗಲೇ ಆಗಮಿಸಿದ ಎಲ್ಲಾ ಬೆಳಗಾವಿಯ ನಿವಾಸಿಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ತಬ್ಲಿಘಿಗಳು ತುಂಬಾನೇ ಪುಂಡಾಟ ಮೆರೆಯುತ್ತಿದ್ದಾರೆ. ಕರ್ತವ್ಯದಲ್ಲಿರುವ ಡಾಕ್ಟರ್ ನರ್ಸ್ ಗಳ ಮೇಲೆ ಉಗುಳಿ ರಂಪಾಟವನ್ನು ಮಾಡುತ್ತಿದ್ದಾರೆ. ಇದೇ ಬೀದರ್ ಆಸ್ಪತ್ರೆಯಲ್ಲಿಯೂ ಕೂಡ ಕ್ವಾರಂಟೈನ್ ಗೆ ಒಳಗಾಗಿರುವ ತಬ್ಲಿಘಿಗಳು ಅಲ್ಲಿಯ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
ಮಾರ್ಚ್ 18ರಂದು ಬೆಳಗಾವಿಯ ಖಾನಾಪುರಕ್ಕೆ ದೆಹಲಿಯ ಜಮಾತ್ ನಿಂದ 24 ಜನರು ಬಂದಿದ್ದರು. ಇವರಲ್ಲಿ 13 ಮಂದಿಯನ್ನು ಈಗಾಗಲೇ ವಶಕ್ಕೆ ಪಡೆದು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ. 24 ಜನರುಗಳ ಪೈಕಿ 11 ಮಂದಿ ಎಸ್ಕೇಪ್ ಆಗಿದ್ದರು. ನಾಪತ್ತೆಯಾಗಿರುವ 11 ಮಂದಿಯನ್ನು ಪೊಲೀಸರು ಈಗಾಗಲೇ ಹುಡುಕಾಡುತ್ತಿದ್ದಾರೆ.
ಬೀದರ್: ದೆಹಲಿಯ ತಬ್ಲಿಘಿಯಲ್ಲಿ ಭಾಗಿಯಾಗಿದ್ದವರು ಉತ್ತರ ಪ್ರದೇಶದ ಐಸೋಲೇಷನ್ ವಾರ್ಡ್ಗಳಲ್ಲಿ ಉದ್ಧಟತನ ತೋರಿದ್ದಂತೆಯೇ ರಾಜ್ಯದಲ್ಲೂ ಕೂಡ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಬೀದರಿನ ಬ್ರೀಮ್ಸ್ ಐಸೋಲೇಷನ್ ವಾರ್ಡ್ ನಲ್ಲಿ ಇರುವ 10 ಜನ ವೈರಸ್ ಸೋಂಕಿತರು ತಮಗೆ ಮನೆ ಊಟ ಮತ್ತು ಹೈಫೈ ಕೊಠಡಿ ಬೇಕು ಅಂತ ಕಿರಿಕಿರಿಯನ್ನು ಮಾಡಿ ಬೆದರಿಸುತ್ತಿದ್ದಾರೆ.
ನಾವು ಹೇಳಿರುವ ಸೌಲಭ್ಯಗಳನ್ನು ಕೊಡಲಿಲ್ಲ ಎಂದಾದರೆ ಡಾಕ್ಟರ್ ನರ್ಸ್ ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕನ್ನು ಹಬ್ಬಿಸುತ್ತೇವೆ ಎಂದು ಬೆದರಿಕೆಯನ್ನೂ ಹಾಕಿದ್ದಾರೆ. ಈ ಜಮಾತ್ ದೂರ್ತರ ವರ್ತನೆಯಿಂದ ವೈದ್ಯ ಮತ್ತು ಸಿಬ್ಬಂದಿಗಳು ಹೈರಾಣಾಗಿ ಹೋಗಿದ್ದಾರೆ.
ಇದರ ಬಗ್ಗೆ ಬೀದರ್ ಆರೋಗ್ಯಾಧಿಕಾರಿ ವಿ.ಜಿ. ರೆಡ್ಡಿ ಅವರು ಪಬ್ಲಿಕ್ ಟಿವಿಯ ಜೊತೆ ಮಾತನಾಡಿ Covid19 ವೈರಸ್ ಸೋಂಕು ಹರಡುವ ಸಾಧ್ಯತೆಯಿಂದಾಗಿ ಮನೆಯಿಂದ ಊಟ ನೀಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸ್ಪತ್ರೆಯ ಊಟವನ್ನೇ ನೀಡಲಾಗುತ್ತಿದೆ ಎಂದು ಅವರಿಗೆ ತಿಳಿಸಿದ್ದೇವೆ. ಅಷ್ಟೇ ಅಲ್ಲದೇ ನಮ್ಮ ವೈದ್ಯಕೀಯ ಸಿಬ್ಬಂದಿಗಳಿಗೂ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.