ನಿಮ್ಮ ಸ್ವಾಭಿಮಾನವನ್ನು ಕೆಣಕುವಂಥ ಕೆಲಸ ಮಾಡಲಾಗುತ್ತದೆ. ಮಾತನಾಡಿದ ರೀತಿಯಲ್ಲೇ ಕೆಲಸ ಮಾಡಿ ತೋರಿಸುವಂತೆ ಸವಾಲು ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ಇರುವುದು ಅಗತ್ಯ. ಮೇಲಧಿಕಾರಿಗಳು ಅಥವಾ ಮಾಲೀಕರ ಜತೆ ಮಾತಿಗೆ ಮಾತು ಬೆಳೆದು ಕೆಲಸ ಬಿಡುವ ತನಕ ಹೋಗುತ್ತದೆ.
ಯಾವ ಸಣ್ಣ ಸಂಗತಿಯನ್ನೂ ನಿರ್ಲಕ್ಷ್ಯ ಮಾಡದಿರಿ. ಅದರಲ್ಲೂ ಕಾನೂನಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಸರ್ಕಾರಿ ನೌಕರರು ನಿಯಮಾವಳಿಗಳನ್ನು ಪಾಲನೆ ಮಾಡಿ. ನಿಮ್ಮಿಂದ ಸಾಧ್ಯವಾದಲ್ಲಿ ಕನಿಷ್ಠ ಒಬ್ಬರಿಗಾದರೂ ಊಟ ಹಾಕಿ. ಸಂಗಾತಿಯ ಸಲಹೆಗಳನ್ನು ಕೇಳಿಸಿಕೊಂಡು, ಅನುಸರಿಸಿ.
ಮಾತ್ರೆ- ಔಷಧಗಳನ್ನು ತೆಗೆದುಕೊಳ್ಳುವಾಗ ಎಕ್ಸ್ ಪೈರಿ ದಿನಾಂಕವನ್ನು ಸರಿಯಾಗಿ ಪರಿಶೀಲಿಸಿ. ದೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಲಿದ್ದೀರಿ. ಇತರರ ಮಧ್ಯದ ಭಿನ್ನಾಭಿಪ್ರಾಯಗಳನ್ನು ರಾಜೀ- ಸಂಧಾನದ ಮೂಲಕ ಬಗೆಹರಿಸುವಿರಿ.
ವೈದ್ಯಕೀಯ, ಬ್ಯಾಂಕಿಂಗ್ ಹಾಗೂ ಕೃಷಿ ಕ್ಷೇತ್ರದಲ್ಲಿ ಪ್ರಮುಖ ಹುದ್ದೆಗಳಲ್ಲಿ ಇರುವವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ. ನಿಮ್ಮಿಂದ ನಾನಾ ಬಗೆಯ ಸಹಾಯವನ್ನು ಕೇಳಿಕೊಂಡು ಜನರು ಬರಲಿದ್ದಾರೆ. ಗುಟ್ಟಿನ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ಸಾಲವನ್ನು ವಸೂಲಿ ಮಾಡುವುದಕ್ಕೆ ಬಹಳ ಪ್ರಯತ್ನ ಪಡುತ್ತೀರಿ. ಉದ್ಯೋಗಸ್ಥರಿಗೆ ಬಹಳ ಒತ್ತಡದ ದಿನ ಇದಾಗಿರುತ್ತದೆ. ನೀವು ನೀಡುವ ಯಾವುದೇ ಸಲಹೆಯಿಂದ ನಷ್ಟ ಎದುರಾಗುತ್ತದೆ. ರುಚಿಕಟ್ಟಾದ ಊಟ- ತಿಂಡಿಯನ್ನು ಸವಿಯುವ ಯೋಗ ನಿಮ್ಮ ಪಾಲಿಗೆ ಇದೆ. ದೇವತಾ ಅನುಷ್ಠಾನಕ್ಕೆ ಸೂಕ್ತ ಸಮಯ ಇದು.
ಎಲ್ಲ ಕೆಲಸ- ಕಾರ್ಯಗಳೂ ನೀವು ಅಂದುಕೊಂಡಂತೆಯೇ ನಡೆಯುತ್ತದೆ. ಲೆಕ್ಕಾಚಾರದ ಹೆಜ್ಜೆಗಳನ್ನು ಇಡುತ್ತಾ ಬಂದಿರುವ ನಿಮಗೆ ಈಗ ಅದರ ಫಲ ದೊರೆಯಲಿದೆ. ಕ್ಲಿಷ್ಟ ಸಮಸ್ಯೆಗಳಿಗೆ ನಿಮ್ಮಿಂದ ಪರಿಹಾರ ದೊರೆಯಲಿದೆ. ಮುಖ್ಯವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಇಡದಂತೆ ಎಚ್ಚರವಾಗಿರಿ.
ಪ್ರವಾಸೋದ್ಯಮ, ಲೇವಾದೇವಿ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಿಗೆ ಭಾರೀ ಹಿನ್ನಡೆ ಆಗಲಿದೆ. ಬೇರೆಯವರಿಗೆ ನಷ್ಟ ಕಟ್ಟಿಕೊಡಬೇಕಾದ ಸಂದರ್ಭ ಬರಬಹುದು. ಪೊಲೀಸ್ ಠಾಣೆ ಮೆಟ್ಟಿಲೇರುವ ಸ್ಥಿತಿಯೂ ಬರಬಹುದು. ಆದರೆ ನಿಮ್ಮ ನಾಲಗೆ ಹತೋಟಿಯಲ್ಲಿ ಇಟ್ಟುಕೊಂಡರೆ ಹಲವು ಸಮಸ್ಯೆಗಳು ಬಗೆಹರಿಯುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರಿಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ಸಹಾಯದ ಅಗತ್ಯ ಇರುವವರಿಗೆ ನಿಮ್ಮ ಸಮಯಪ್ರಜ್ಞೆಯಿಂದ ಅದು ದೊರೆಯುತ್ತದೆ. ಪ್ರೇಮಿಗಳಿಗೆ ಬಹಳ ಸಂತೋಷವಾದ ದಿನ ಇದು. ಪ್ರಮುಖ ವಿಚಾರದ ಬಗ್ಗೆ ಮನೆಯಲ್ಲಿ ಚರ್ಚೆ ನಡೆಸುತ್ತೀರಿ.
ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ಗೋಚರಿಸುತ್ತವೆ. ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆಹಾರ ಪಥ್ಯದಲ್ಲಿ ಎಚ್ಚರಿಕೆಯಿಂದ ಇರಬೇಕು. ಮಧುಮೇಹದಂಥ ಸಮಸ್ಯೆ ಇರುವವರು ಔಷಧ ಬದಲಿಸುವ ಮುನ್ನ ಸೂಕ್ತ ಸಲಹೆ ಪಡೆಯಿರಿ.
ಪೂಜೆ- ಪುನಸ್ಕಾರ, ಅಧ್ಯಾತ್ಮ ಚಿಂತನೆಗೆ ಹೆಚ್ಚಿನ ಸಮಯ ಹೋಗುತ್ತದೆ. ಬಂಧುಗಳ- ಸ್ನೇಹಿತರ ಸಹಾಯದಿಂದ ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಪೂರೈಸಲು ಅನುಕೂಲ ಆಗುತ್ತದೆ. ವಾಹನ ಖರೀದಿಗಾಗಿ ಕೂಡಿಸಿಟ್ಟಿದ್ದ ಹಣ ಬೇರೆ ಉದ್ದೇಶಕ್ಕೆ ಖರ್ಚಾಗುವ ಸಾಧ್ಯತೆ ಇದೆ. ಇತರರ ಸ್ಥಿತಿಯನ್ನೂ ಅರಿತು ಮಾತನಾಡಿ.
ನೀವು ನಿರೀಕ್ಷೆ ಮಾಡಿದಂತೆಯೇ ಕೆಲವು ಒತ್ತಡ ನಿಮ್ಮ ಮೇಲೆ ಬೀಳುತ್ತದೆ. ಯಾರ ಬಳಿಯೂ ಹೇಳಿಕೊಳ್ಳಲಾಗದ ಸಂಕಟಗಳನ್ನು ಅನುಭವಿಸುತ್ತೀರಿ. ಹೊಟ್ಟೆ ನೋವು, ಭುಜದ ನೋವಿನಂಥ ದೈಹಿಕ ಬಾಧೆಗಳು ಅನುಭವಕ್ಕೆ ಬರುತ್ತವೆ. ಈ ಹಿಂದೆ ನೆರವು ಮಾಡಿದ್ದೀರಿ ಎಂಬ ಕಾರಣಕ್ಕೆ ಈಗ ಸಹಾಯ ಕೇಳಲು ಹೋಗಬೇಡಿ. ಅವಮಾನದ ಪಾಲಾಗುತ್ತೀರಿ.
ನಿಮ್ಮಲ್ಲಿ ಕೆಲವರಿಗೆ ಅನಿರೀಕ್ಷಿತವಾಗಿ ಬಡ್ತಿ, ವೇತನ ಹೆಚ್ಚಳ ದೊರೆಯುವ ಸಾಧ್ಯತೆ ಇದೆ. ಅದೇ ಸಮಯಕ್ಕೆ ಜವಾಬ್ದಾರಿ ಕೂಡ ವಿಪರೀತ ಹೆಚ್ಚಾಗಲಿದೆ. ಕುಟುಂಬದ ಸಲುವಾಗಿ ಹೆಚ್ಚು ಸಮಯ ಮೀಸಲಿಡುವುದಕ್ಕೆ ಕಷ್ಟವಾಗುತ್ತದೆ. ಸಂಗಾತಿ- ಮಕ್ಕಳ ಬೇಕು- ಬೇಡಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಿ.
Tags:
ದಿನ ಭವಿಷ್ಯ