ಉದ್ಯೋಗ ಅಥವಾ ವೃತ್ತಿಗೆ ನೆರವಾಗುವಂತೆ ಹೊಸ ಕೋರ್ಸ್ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಮನೆಯಲ್ಲಿದ್ದ ಹಳೇ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಸೂಕ್ತ ಖರೀದಿದಾರರನ್ನು ಹುಡುಕಲು ಪ್ರಯತ್ನಿಸುತ್ತೀರಿ. ಸ್ನೇಹಿತರು ಅಥವಾ ಸಂಬಂಧಿಕರು ನಿಮ್ಮ ನೆರವಿಗೆ ಬರುತ್ತಾರೆ.
ಅನಿರೀಕ್ಷಿತವಾದ ಖರ್ಚು ಎದುರಾಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬದಲ್ಲಿ ಮನಸ್ತಾಪ, ಭಿನ್ನಾಭಿಪ್ರಾಯಗಳು ಇದ್ದಲ್ಲಿ ಬಗೆಹರಿಸುತ್ತೀರಿ. ಸ್ಥಳ ಬದಲಾವಣೆ ಬಗ್ಗೆ ಆಲೋಚನೆ ಮಾಡುತ್ತೀರಿ. ಅದಕ್ಕೆ ಅಗತ್ಯವಾದ ಹಣ ಹೊಂದಿಸಲು ಪ್ರಯತ್ನ ಆರಂಭಿಸುತ್ತೀರಿ.
ಸಣ್ಣ ವಿಚಾರವೊಂದಕ್ಕೆ ದೊಡ್ಡ ಮಟ್ಟದ ಚರ್ಚೆ, ವಾದ- ವಿವಾದ ಆಗುವ ಸಾಧ್ಯತೆಗಳಿವೆ. ಸ್ವಂತ ಅನುಭವದ ಮೂಲಕ ನೀವು ಪಡೆದುಕೊಂಡ ಬುದ್ಧಿವಂತಿಕೆ, ಜ್ಞಾನ ಉಪಯೋಗಕ್ಕೆ ಬಾರದಂತಾಗುತ್ತದೆ. ನೈತಿಕತೆಯ ಪ್ರಶ್ನೆ ಎದುರಾಗಿ, ಕೆಲವು ಕೆಲಸಗಳನ್ನು ನೀವಾಗಿಯೇ ಕೈ ಬಿಡುವಂಥ ಸ್ಥಿತಿ ಎದುರಾಗುತ್ತದೆ.
ಬೇಡದ ವಿಚಾರಕ್ಕೆ ತಲೆ ಹಾಕದೆ ದೂರ ಇದ್ದು, ಪರಿಸ್ಥಿತಿಯನ್ನು ಅವಲೋಕನ ಮಾಡಿ. ನೀವಾಗಿಯೇ ಯಾರ ಮೇಲೂ ಸವಾಲು ಹಾಕಬೇಡಿ. ಕೋರ್ಟ್ ವ್ಯಾಜ್ಯಗಳಿಗೆ ಸಂಬಂಧಿಸಿದ ಅಗತ್ಯ ಇರುವ ದಾಖಲೆ ಪತ್ರಗಳನ್ನು ಹೊಂದಿಸಲು ಸಮಯ ಮೀಸಲಿಡುತ್ತೀರಿ. ಶುಭ ಕಾರ್ಯಗಳಿಗಾಗಿ ಹಣ ಹೊಂದಿಸಬೇಕಾಗುತ್ತದೆ.
ಆಹಾರ ಪಥ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಯೋಗ- ಧ್ಯಾನ ಕಲಿಯಲು ಆರಂಭಿಸುವುದು ಉತ್ತಮ. ಜ್ವರ, ಕಫದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ತಕ್ಷಣವೇ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ವಿಪರೀತ ಪ್ರಶ್ನೆಗಳನ್ನು ಕೇಳಿದರೆ, ಬೇರೆಯವರ ಪಾಲಿಗೆ ಶತ್ರುವಾಗುತ್ತೀರಿ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರು ಅದರಿಂದ ದೂರ ಇರುವುದು ಅತ್ಯುತ್ತಮ. ನೀಮು ಮಾಡಿದ ಪೋಸ್ಟ್ ಅಥವಾ ಕಾಮೆಂಟ್ ನಿಂದಾಗಿ ಇತರರು ದೊಡ್ಡ ಮಟ್ಟದಲ್ಲಿ ಟೀಕಿಸುವಂತಾಗುತ್ತದೆ. ನಾನು ಮಾಡಿದ್ದೇ ಸರಿ, ನನಗೆ ಅನಿಸಿದ್ದೆಲ್ಲ ನಿಜ ಎಂಬ ಧೋರಣೆಯನ್ನು ಬಿಡಿ.
ನಿಮ್ಮ ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಯಾರಾದರೂ ತಮಗೆ ಸಹಾಯ ಮಾಡುವಂತೆ, ಸಲಹೆ ನೀಡುವಂತೆ ಕೇಳಿದರೆ ಮಾತ್ರ ನೆರವಾಗಿ. ಇಲ್ಲದಿದ್ದಲ್ಲಿ ಅವಮಾನದ ಪಾಲಾಗುತ್ತೀರಿ. ನಿಮ್ಮನ್ನು ಅಹಂಕಾರಿ, ಸ್ವಾರ್ಥಿ ಎಂದು ಎಲ್ಲರೆದುರು ಜರೆಯುವ ಸಾಧ್ಯತೆಗಳಿವೆ.
ಯಾವುದೇ ನಿರೀಕ್ಷೆ ಇಲ್ಲದೆ ಬದುಕುವುದನ್ನು ಕಲಿಯಿರಿ. ನೀವು ನೀಡಿದ ಸಹಾಯಕ್ಕೆ ಪ್ರತಿಯಾಗಿ ಏನನ್ನೂ ನಿರೀಕ್ಷೆ ಮಾಡಬೇಡಿ. ದೂರಗಾಮಿ ಆಲೋಚನೆಗಳು ಅಗತ್ಯ. ಹೆಚ್ಚುವರಿ ಹಣಕಾಸು ಅಗತ್ಯ ಕಂಡುಬಂದಲ್ಲಿ ಆಲೋಚನೆ ಮಾಡಿ, ಸಾಧ್ಯವಾದಷ್ಟೂ ಖರ್ಚು ಮುಂದಕ್ಕೆ ಹಾಕಿ.
ಅತ್ಯುತ್ತಮವಾದ ಮನರಂಜನೆ ಸಿಗುತ್ತದೆ. ಸಂಗಾತಿಗೆ ಜತೆಗೆ ಉತ್ತಮ ಸಮಯ ಕಳೆಯುವ ಯೋಗ ಇದೆ. ಯಾರಿಗಾದರೂ ಮಾತು ಕೊಟ್ಟಿದ್ದರೆ ಅದರಂತೆ ನಡೆದುಕೊಳ್ಳಿ. ಸಲ್ಲದ ನೆಪ ಹೇಳಿಕೊಂಡು, ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಅಧ್ಯಾತ್ಮ ಚಿಂತನೆ, ಧ್ಯಾನದ ಕಡೆಗೆ ಮನಸ್ಸು ಕೊಡಿ.
ಯಾರನ್ನೋ ಕಷ್ಟದಿಂದ ತಪ್ಪಿಸುವ ಯತ್ನದಲ್ಲಿ ನೀವು ಸಮಸ್ಯೆಯ ಸುಳಿಗೆ ಸಿಲುಕಿಕೊಳ್ಳುತ್ತೀರಿ. ಭಾವನಾತ್ಮಕವಾಗಿ ಯಾರನ್ನು ಬಹಳ ಹಚ್ಚಿಕೊಂಡಿರುತ್ತೀರೋ ಅಂಥವರು ನಿಮ್ಮಿಂದ ದೂರವಾಗುವ ಸಾಧ್ಯತೆ ಇದೆ. ಕೆಲಸದ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಹಿರಿಯ ಅಧಿಕಾರಿಗಳ ಜತೆ ಮನಸ್ತಾಪ ಆಗಬಹುದು.
ಎಲ್ಲರ ಬಗ್ಗೆಯೂ ಕರುಣೆ, ಅನುಕಂಪ ತೋರಿಸುತ್ತೀರಿ. ನಿಮ್ಮ ಸಲಹೆ- ನೆರವು ಕೇಳಿಕೊಂಡು ನಾಲ್ಕು ಜನ ಬರಬಹುದು. ಅದರಲ್ಲೂ ರಾಜಕಾರಣಿಗಳು, ಅಧಿಕಾರಿಗಳಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಉದ್ಯಮಿಗಳಿಗೆ ಲಾಭದ ಪ್ರಮಾಣದಲ್ಲಿ ಅಲ್ಪ ಇಳಿಕೆ ಆಗುತ್ತದೆ. ಆದರೆ ಚಿಂತೆ ಮಾಡುವ ಅಗತ್ಯ ಇಲ್ಲ.
ನಿಮ್ಮ ಸ್ವಾಭಿಮಾನದ ಹೆಜ್ಜೆಗಳಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಲಿದೆ. ಪೂರ್ವ ನಿರ್ಧಾರಿತ ಕೆಲಸಗಳಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆದರೂ ಲಾಭಕ್ಕೇನೂ ಕೊರತೆ ಆಗುವುದಿಲ್ಲ. ವಿವಿಧ ಕ್ಷೇತ್ರದ ಬಗ್ಗೆ ನಿಮಗಿರುವ ಅನುಭವ ಹಾಗೂ ಜ್ಞಾನಕ್ಕೆ ಮೆಚ್ಚುಗೆ ಸೂಚಿಸಿ, ಸೂಕ್ತ ಸ್ಥಾನಮಾನ ದೊರೆಯಲಿದೆ.
Tags:
ದಿನ ಭವಿಷ್ಯ