ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವವರಿಗೆ ಮಿಶ್ರ ಫಲಿತಾಂಶ. ಭೂಮಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ದೊಡ್ಡ ಮೊತ್ತದ ವ್ಯವಹಾರಗಳು ಅಂದುಕೊಂಡಂತೆ ಸಾಗುವುದಿಲ್ಲ. ಆಂಜನೇಯ ದೇವಸ್ಥಾನದಲ್ಲಿ ದರ್ಶನ ಪಡೆಯಿರಿ.
ಪಿತ್ರಾರ್ಜಿತವಾದ ಆಸ್ತಿ ವಿಚಾರಗಳಲ್ಲಿ ವೈಮನಸ್ಯ ಸೃಷ್ಟಿಯಾಗಬಹುದು. ನೀವು ಆಡುವ ಮಾತಿಗೆ ಸಲ್ಲದ ಅರ್ಥ ಕಲ್ಪಿಸಿ, ವರ್ಚಸ್ಸು ಹಾಳು ಮಾಡುವುದಕ್ಕೆ ಪ್ರಯತ್ನಿಸಲಾಗುತ್ತದೆ. ಈ ದಿನ ತಾಳ್ಮೆ ಬಹಳ ಮುಖ್ಯ. ಹಳೆ ಸ್ನೇಹಿತರು ಮನೆಗೆ ಬರುವ ಸಾಧ್ಯತೆ ಇದೆ. ಅವರಿಗಾಗಿ ಸಮಯ ಮೀಸಲಿಡುತ್ತೀರಿ.
ಪ್ರಾಮಾಣಿಕತೆಯಿಂದ ಮಾಡಿದ ಕೆಲಸವೊಂದು ಹಲವು ಅವಕಾಶಗಳನ್ನು ತಂದುಕೊಡುತ್ತದೆ. ಭಾರೀ ವಾಹನಗಳ ಚಾಲನೆ ಮಾಡುವವರಿಗೆ ನಿರೀಕ್ಷಿತ ಆದಾಯದಲ್ಲಿ ಕುಸಿತವಾಗುತ್ತದೆ. ವ್ಯಾಪಾರಿ- ಉದ್ಯಮಿಗಳಿಗೆ ಖರ್ಚಿನ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯತೆ. ಮನರಂಜನೆಗಾಗಿ ಹಣ ಖರ್ಚು ಮಾಡುತ್ತೀರಿ.
ನಿಮ್ಮಿಂದ ನೆರವು ಬಯಸಿ ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಅವರಿಗೆ ಯಾವ ರೀತಿಯಿಂದ ಸಹಾಯ ಮಾಡಬಹುದೋ ಮಾಡಿ. ನಾಜೂಕಾದ ವ್ಯವಹಾರಗಳನ್ನು ಮಾಡಿ ಮುಗಿಸುತ್ತೀರಿ. ಸ್ವತಂತ್ರ ಆಲೋಚನೆ ಮೂಲಕ ಇತರರ ಗಮನ ಸೆಳೆಯುತ್ತೀರಿ. ವಾಕ್ಚಾತುರ್ಯವು ಲಾಭ ಮಾಡಿಕೊಡಲಿದೆ.
ಚಿನ್ನಾಭರಣ ಖರೀದಿಗಾಗಿ ಹಣ ಖರ್ಚು ಮಾಡಲಿದ್ದೀರಿ. ಇಲ್ಲದಿದ್ದರೆ ಸಾಲ ಮಾಡಿಯಾದರೂ ಖರೀದಿ ಮಾಡುವ ಯೋಗ ಇದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲಿನ ಅವಲಂಬನೆ ಹೆಚ್ಚಾಗಲಿದೆ. ಮಹತ್ತರವಾದ ಜವಾಬ್ದಾರಿಯನ್ನು ನಿಮಗೆ ವಹಿಸಬಹುದು. ದೈವಾನುಗ್ರಹ ಹಾಗೂ ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ.
ಬೇಕೆಂತಲೆ ನಿಮ್ಮನ್ನು ರೇಗಿಸುವ, ಹೀಯಾಳಿಸುವ ಜನರು ಕಾಣಿಸಿಕೊಳ್ಳುತ್ತಾರೆ. ಆತ್ಮವಿಶ್ವಾಸವನ್ನು ಕುಂದಿಸುವ ಸಲುವಾಗಿ ನಾನಾ ಬಗೆಯ ತೊಂದರೆ ನೀಡಬಹುದು. ಮುಖ್ಯವಾಗಿ ವೃತ್ತಿಪರರು ಭವಿಷ್ಯದ ಯೋಚನೆಗಳ ಬಗ್ಗೆ ಯಾರ ಜತೆಗೂ ವಿಚಾರ ಹಂಚಿಕೊಳ್ಳಬೇಡಿ. ಹಣಕಾಸಿನ ಮೂಲವನ್ನು ತಿಳಿಸಬೇಡಿ.
ಆಪ್ತರ ಜತೆಗೆ ಮಹತ್ವವಾದ ವಿಷಯಗಳ ಚರ್ಚೆ ನಡೆಸಲಿದ್ದೀರಿ. ಹೆಚ್ಚುವರಿ ಆದಾಯ ಮೂಲಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ವ್ಯಾಪಾರ- ವ್ಯವಹಾರ ಶುರು ಮಾಡುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ಸಾಲದ ಬಾಕಿ ಬರಬೇಕಿದ್ದಲ್ಲಿ ಅದಕ್ಕೆ ಈ ದಿನ ಪ್ರಯತ್ನಿಸಿ. ತಂದೆ- ತಾಯಿಗಳ ಸಲಹೆಗಳನ್ನು ಕೇಳಿಸಿಕೊಳ್ಳಿ.
ಮನೆ ದುರಸ್ತಿ ಅಥವಾ ಗೃಹಾಲಂಕಾರಕ್ಕಾಗಿ ಸಾಲ ಮಾಡುವ ಯೋಗ ಇದೆ. ಬಹಳ ಕಾಲದಿಂದ ಅಂದುಕೊಳ್ಳುತ್ತಿದ್ದ ವಸ್ತುಗಳನ್ನು ಖರೀದಿ ಮಾಡಬಹುದು. ಆದರೆ ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದಲ್ಲಿ ಖರ್ಚಿನ ಮೇಲೆ ನಿಗಾ ಇರಲಿ. ಹಣಕಾಸಿನ ನೆರವು ನೀಡುವುದಾಗಿ ಯಾರಿಗೆ ಮಾತು ಕೊಡುವ ಮುನ್ನ ಯೋಚಿಸಿ.
ಸಂಬಂಧಿಕರು, ಸ್ನೇಹಿತರನ್ನು ಭೇಟಿ ಆಗಲಿದ್ದೀರಿ. ಕಣ್ಣು- ಹಲ್ಲಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಅದೃಷ್ಟವನ್ನು ನಂಬಿಕೊಂಡು ಹಣ ಹೂಡುವ ವ್ಯವಹಾರಗಳಿಗೆ ಕೈ ಹಾಕಿದರೆ ನಷ್ಟ ಅನುಭವಿಸಬೇಕಾಗುತ್ತದೆ.
ದಾನ- ಧರ್ಮಾದಿ ಕಾರ್ಯಗಳಿಗೆ ಹಣ ಖರ್ಚು ಮಾಡಲಿದ್ದೀರಿ. ದೇವತಾರಾಧನೆಗಾಗಿ ನಿಮ್ಮನ್ನು ನೇತೃತ್ವ ವಹಿಸಿಕೊಳ್ಳುವಂತೆ ಕೇಳಬಹುದು. ಗುಟ್ಟು ವಿಚಾರವನ್ನು ಹೊಸಬರೊಂದಿಗೆ ಹಂಚಿಕೊಳ್ಳಬೇಡಿ. ಅನುಮಾನ ಇದೆ ಎಂಬ ಕಾರಣಕ್ಕೆ ಆಪ್ತರ ಜತೆ ಕಟುವಾಗಿ ನಡೆದುಕೊಂಡರೆ ಮುಂದೆ ಚಿಂತೆ ಮಾಡಬೇಕಾಗುತ್ತದೆ.
ಯಾರೋ ಮಾಡಿದ ತಪ್ಪಿಗೆ ನಿಮ್ಮನ್ನು ಅಪರಾಧಿ ಎಂದು ಬಿಂಬಿಸಲಾಗುತ್ತದೆ. ಆದ್ದರಿಂದ ವ್ಯವಹಾರಗಳಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳಿ. ಯಾವುದೇ ಹೊಸ ವ್ಯವಹಾರವನ್ನು ಆರಂಭಿಸುವುದಕ್ಕೆ ಸೂಕ್ತ ಸಮಯ ಇದಲ್ಲ ಎಂಬುದನ್ನು ನೆನಪಿನಲ್ಲಿಡಿ. ನಿರ್ಮಾಣ ವ್ಯವಹಾರದಲ್ಲಿ ಇರುವವರಿಗೆ ಹಿನ್ನಡೆ ಇದೆ.
ಸಂಪೂರ್ಣ ಸಿದ್ಧತೆ ಮಾಡಿಕೊಳ್ಳದೆ ಅತಿಯಾದ ವಿಶ್ವಾಸದಿಂದ ಹೊಸ ರಂಗಕ್ಕೆ ಜಿಗಿಯಬೇಡಿ. ಅವಮಾನದ ಪಾಲಾಗುತ್ತೀರಿ. ಹೊಸ ವಾಹನ ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಿ, ಹಣಕಾಸನ್ನು ಹೊಂದಿಸಿಕೊಳ್ಳಲಿದ್ದೀರಿ. ಎಂದೋ ನೀವಾಡಿದ ಮಾತು ಈಗ ವಿವಾದಕ್ಕೆ ಕಾರಣ ಆಗಬಹುದು.
Tags:
ದಿನ ಭವಿಷ್ಯ