ಅವೈಜ್ಞಾನಿಕ ಚತುಷ್ಪತ ಕಾಮಗಾರಿ : ಹೊಂಡದಲ್ಲಿ ಬಿದ್ದು ಹಳದೀಪುರದ ಮಹಿಳೆ ಸಾವು


Lady died in haldipura due to bad road conditions

ಕುಮಟಾ : ತರಾತುರಿಯಲ್ಲಿ ಕಾಮಗಾರಿ 75% ಪೂರ್ಣವಾಗಿದೆ ಎಂದು ದಾಖಲಿಸಲು ಹೋಗಿ ಐ. ಆರ್. ಬಿಯ ಕಾಮಗಾರಿಯಿಂದ ಸಾಮಾನ್ಯ ಜನರು ಪ್ರಾಣ ಕಳೆದುಕೊಳ್ಳುವಂತೆ ಆಗಿದೆ.


ಹೌದು ಅವೈಜ್ಞಾನಿಕವಾಗಿ ರಸ್ತೆ ಪಕ್ಕದಲ್ಲಿ ಹೊಂಡ ತೋಡಿ, ರಾತ್ರಿ ಅದಕ್ಕೆ ಒಂದು ಸರಿಯಾದ ಭದ್ರತೆಯು ಒದಗಿಸದೆ ಹೋದ IRB ಯ ಸೋಗಲಾಡಿ ಅಧಿಕಾರಿಗಳ ವರ್ತನೆಗೆ, ಹಳದೀಪುರದ ಬಡ್ನಿಕೇರಿಯ ಲಕ್ಷ್ಮಿ ಕಣಿಯ ಮುಕ್ರಿ ಅನ್ನುವ ಸುಮಾರು 35 ವರ್ಷ ಪ್ರಾಯದ ಹೆಂಗಸು ಶನಿವಾರದಂದು ರಾತ್ರಿ 8 ರ ಸಮಯಕ್ಕೆ ಆ ಹೊಂಡಲ್ಲಿ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿದ್ದರು.



ಅವರು ಇಂದು ಬೆಳಿಗ್ಗೆ ಕೊನೆ ಉಸಿರು ಎಳೆದಿದ್ದಾರೆ ಎಂದು ವರದಿಯಾಗಿದೆ.


ಐ ಆರ್ ಬಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಶಾಹಿ ಧೋರಣೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement