ಉಡುಪಿ: ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅನಾಮಯ ಯೋಗೇಶ್ ದಿವಾಕರ್ ಎಂಬ ವಿದ್ಯಾರ್ಥಿ, ವಿದ್ಯಾರ್ಥಿಗಳ ವಾರದ ವಿಶೇಷ ಆವೃತ್ತಿಯ 'ಕೌನ್ ಬನೇಗಾ ಕರೋಡ್ಪತಿ' (ಕೆಬಿಸಿ) ಕಾರ್ಯಕ್ರಮದಲ್ಲಿ 50 ಲಕ್ಷ ರೂ.ಗಳ ಬಹುಮಾನವನ್ನು ಗೆದ್ದಿದ್ದಾನೆ.
ವಿದ್ಯಾರ್ಥಿಗಳ ವಿಶೇಷ ವಾರದಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡಲು ವೇದಾಂತು ಆನ್ಲೈನ್ ತನ್ನ ಆನ್ಲೈನ್ ಕಲಿಕಾ ಅಪ್ಲಿಕೇಶನ್ನಲ್ಲಿ ಅಕ್ಟೋಬರ್ 5 ರಿಂದ 25 ರವರೆಗೆ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು. 10 ರಿಂದ 14 ವರ್ಷದೊಳಗಿನ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಈ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳನ್ನು ಆಯ್ಕೆ ಆಯ್ಕೆ ಮಾಡಲಾಗಿತ್ತು. ಆ ವಿದ್ಯಾರ್ಥಿಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಸುಮಾರು 200 ವಿದ್ಯಾರ್ಥಿಗಳಿಗೆ ಸಂದರ್ಶನವನ್ನು ನಡೆಸಲಾಯಿತು. ಈ ಸಂದರ್ಶನವನ್ನು ಎದುರಿಸಿ ರಿಯಾಲಿಟಿ ಗೇಮ್ ಶೋನ ಅಂತಿಮ ಸುತ್ತಿಗೆ ಆಯ್ಕೆಯಾದ ಎಂಟು ಎಂಟು ಜನ ವಿದ್ಯಾರ್ಥಿಗಳಲ್ಲಿ ಅನಮಯ ಕೂಡ ಸೇರಿದ್ದಾರೆ.
ಕೊನೆಯ ಗೇಮ್ ಶೋಗೆ ಆಯ್ಕೆಯಾದ ಅನಾಮಯಾ 14 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿ 15ನೇ ಪ್ರಶ್ನೆಯನ್ನು ಪ್ರಯತ್ನಿಸದಿರಲು ನಿರ್ಧರಿಸಿದರು. ಒಂದು ವೇಳೆ 15ನೇ ಪ್ರಶ್ನೆಯನ್ನು ಸರಿಯಾಗಿ ಉತ್ತರಿಸಿದ್ದರೆ ಅವರು ಒಂದು ಕೋಟಿ ರೂ. ಗೆಲ್ಲುತ್ತಿದ್ದರು. 14 ಪ್ರಶ್ನೆಗಳನ್ನು ಉತ್ತರಿಸಿದ ಅವರಿಗೆ 50 ಲಕ್ಷ ರೂಪಾಯಿ ಬಹುಮಾನ ಲಭಿಸಿದೆ.
ಕರಾವಳಿ ಕರ್ನಾಟಕದ ಕೀರ್ತಿಪತಾಕೆಯನ್ನು ಭಾರತದಾದ್ಯಂತ ಪಸರಿಸಿದ ಈ ಹೆಮ್ಮೆಯ ಕರಾವಳಿ ಕುಮಾರನಿಗೆ ಇರಲಿ ನಿಮ್ಮದೊಂದು ಸಲಾಮು. ( ಶೇರ್ ಮಾಡಿ)