ಒಪ್ಪಂದದಂತೆ ನಡೆದುಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ನಿಮ್ಮಿಂದ ಅದರಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವಾಸ್ತವ ಸ್ಥಿತಿಯನ್ನು ತಿಳಿಸಿ, ಇನ್ನೂ ಸ್ವಲ್ಪ ಸಮಯ ಕೇಳಿ ಪಡೆಯಿರಿ. ಆದರೆ ಸುಳ್ಳು ಹೇಳುವ ಪ್ರಯತ್ನ ಮಾತ್ರ ಬೇಡ. ರಾಜಕೀಯ ನಾಯಕರಿಗೆ ಹೊಸ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ.
ಮನರಂಜನೆ ಸಲುವಾಗಿ ಹೆಚ್ಚಿನ ಹಣ ಖರ್ಚು ಮಾಡಲಿದ್ದೀರಿ. ವಾಹನ ಮಾರುವ ಆಲೋಚನೆ ಬರಲಿದೆ. ಡೇರಿ ವ್ಯವಹಾರ ಮಾಡುವವರಿಗೆ ಬಾಕಿ ಹಣ ವಸೂಲಿ ಆಗುವ ಅವಕಾಶಗಳಿವೆ. ಭೂಮಿ ವ್ಯವಹಾರಗಳಿಗೆ ಮತ್ತೆ ಚಾಲನೆ ದೊರೆಯಲಿದ್ದು, ಮನಸ್ಸಿಗೆ ಸಮಾಧಾನ ದೊರೆಯಲಿದೆ.
ನಿಮ್ಮ ನಿರ್ದಾಕ್ಷಿಣ್ಯ ಮಾತುಗಳಿಂದ ಸಂಬಂಧಿಕರಲ್ಲಿ, ಕುಟುಂಬ ವರ್ಗದವರಲ್ಲಿ ಸಿಟ್ಟಿಗೆ ಕಾರಣರಾಗಲಿದ್ದೀರಿ. ಆದ್ದರಿಂದ ಸಣ್ಣ- ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿ, ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಸಾಂಸಾರಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳಬೇಡಿ.
ಸಣ್ಣ ಕೆಲಸ ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ. ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬ ಏಕೈಕ ಕಾರಣಕ್ಕೆ ಅಪಾಯಕರ ಸಂಗತಿಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ವದಂತಿ ಬಂದಿದೆ ಎಂದು ನಿರ್ಲಕ್ಷ್ಯ ಮಾಡಿದ್ದ ಸಂಗತಿಯೊಂದಕ್ಕೆ ದಿಢೀರನೇ ಪ್ರಾಮುಖ್ಯ ಬರುತ್ತದೆ.
ಗುರಿಯ ಕಡೆಗೆ ಸಾಗುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸುತ್ತೀರಿ. ಸ್ನೇಹಿತರು ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಲಿದ್ದಾರೆ. ದೇವತಾ ಕಾರ್ಯಗಳಿಗಾಗಿ ಸಮಯ ಮೀಸಲಿಡಲಿದ್ದೀರಿ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಪುಷ್ಕಳವಾದ ಭೋಜನ ಸವಿಯುವ ಯೋಗ ಇದೆ.
ಸ್ವಂತ ವ್ಯಾಪಾರ- ವ್ಯವಹಾರ ಮಾಡಿಕೊಂಡಿರುವವರಿಗೆ ಮುಖ್ಯವಾದ ತೀರ್ಮಾನ ಕೈಗೊಳ್ಳಲೇಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯವರಾಗಿ ಇರಲು ಸಾಧ್ಯವಿಲ್ಲವಾದ್ದರಿಂದ ನಿಮ್ಮ ನಿರ್ಧಾರಗಳು ಕೆಲವರಿಗೆ ಬೇಸರ ಉಂಟು ಮಾಡಲಿವೆ. ಆಪ್ತರು ನೀಡುವ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ
ನೀವು ಯಾರ ಬಳಿ ನಿಷ್ಠೆಯನ್ನು ನಿರೀಕ್ಷೆ ಮಾಡಿದ್ದರೋ ಅಂಥವರಿಂದಲೇ ದ್ರೋಹವಾಗುವ ಸಾಧ್ಯತೆ ಇದೆ. ಅಥವಾ ಈಗಾಗಲೇ ನಿಮಗೆ ವಿಶ್ವಾಸದ್ರೋಹ ಆಗಿದೆ ಎಂಬ ಅಂಶ ಗೊತ್ತಾಗುತ್ತದೆ. ಶೈಕ್ಷಣಿಕ ರಂಗದಲ್ಲಿ ಇರುವವರಿಗೆ ಮೇಲ್ ಸ್ತರದ ಅಧಿಕಾರಿಗಳಿಂದ ಕಿರಿಕಿರಿ ಆಗುವ ಸುಳಿವು ಸಿಗಲಿದೆ.
ಮಾಮೂಲಿ ದಿನಗಳಿಗಿಂತ ಹೆಚ್ಚಿನ ಉತ್ಸಾಹ ಕಂಡುಬರುತ್ತದೆ. ಮಕ್ಕಳು- ಸಂಗಾತಿಯ ಅಗತ್ಯಗಳಿಗೆ ಹಣದ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತೀರಿ. ಉಡುಗೊರೆ ನೀಡುವ ಸಲುವಾಗಿ ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವನ್ನು ಬದಲಿಸಿಕೊಳ್ಳಬೇಕಾಗಬಹುದು. ಸ್ವಂತ ಉದ್ಯಮ ನಡೆಸುವವರಿಗೆ ಆಸ್ತಿ ಮಾರಬೇಕಾದ ಅಗತ್ಯ ಕಂಡುಬರಬಹುದು.
ಮದ್ಯಪಾನ- ಧೂಮಪಾನದ ವ್ಯಸನ ಇರುವವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಬಹುದು. ಸಂಗಾತಿಯ ಒತ್ತಡಕ್ಕೆ ಮಣಿದು, ಈ ಹಿಂದೆ ಯಾರ ಜತೆ ಜಗಳ ಮಾಡಿಕೊಂಡಿದ್ದರೋ ಅಂಥವರ ಜತೆಗೆ ರಾಜೀ ಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ.
ನೀವೇ ಆರಂಭಿಸಿದ ಆಟವೊಂದನ್ನು ಮುಗಿಸಬೇಕಾಗುತ್ತದೆ. ಇಲ್ಲದ ಆತ್ಮವಿಶ್ವಾಸವನ್ನು ತುಂಬಿ, ಇಷ್ಟು ಸಮಯ ತೆಗೆದುಕೊಂಡ ಅನುಕೂಲವನ್ನು ನಿಲ್ಲಿಸಿಬಿಡಿ. ನೇರವಾಗಿ, ಪ್ರಾಮಾಣಿಕತೆಯಿಂದ ಮಾತನಾಡಲು ಪ್ರಯತ್ನಿಸಿ. ಉಳಿತಾಯದ ಹಣವನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ.
ನಿಮ್ಮ ಅನುಮಾನದ ಸ್ವಭಾವದಿಂದ ದೊಡ್ಡ ಪ್ರಯೋಜನ ಆಗಲಿದೆ. ಮೇಲ್ನೋಟಕ್ಕೆ ಇತರರು ನಿಮ್ಮ ಬಗ್ಗೆ ಯಾವ ಕಾರಣಕ್ಕೆ ಬೇಸರ ವ್ಯಕ್ತಪಡಿಸಿದ್ದರೋ ಆ ನಂತರ ಅದಕ್ಕೆ ಪಶ್ಚಾತಾಪ ಪಡಲಿದ್ದಾರೆ. ಮುಖ್ಯ ಕಾಗದ- ದಾಖಲೆ, ಪತ್ರಗಳಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳಿ.
ಭಾರೀ ಹೂಡಿಕೆಯೊಂದಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆ- ಸೂಚನೆಗಳಿಗೆ ಇತರರು ಬೆಲೆ ನೀಡುತ್ತಾರೆ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಕೆಲವು ಕೆಲಸಗಳು ಆಗುವ ಸೂಚನೆ ಇದ್ದು, ರಾಜಕಾರಣಿಗಳು ಹೆಚ್ಚು ಪ್ರಭಾವಿಗಳಾಗುವ ಲಕ್ಷಣಗಳು ಗೋಚರಿಸುತ್ತವೆ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಹಣ ಮೀಸಲಿಡಲಿದ್ದೀರಿ.
Tags:
ದಿನ ಭವಿಷ್ಯ