ಯಾವುದಾದರೂ ನೆರವು ನೀಡುವ ಭರವಸೆ ಕೊಟ್ಟಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಅದು ಸಾಧ್ಯವಿಲ್ಲ ಎನ್ನಬಹುದು. ಇನ್ನೊಬ್ಬರ ಮಾತನ್ನು ನಂಬಿಕೊಂಡು, ಇತರರಿಗೆ ಭರವಸೆ ನೀಡಬೇಡಿ. ಮನೆಯಲ್ಲಿ ಅಸಮಾಧಾನದ ವಾತಾವರಣ ಉಂಟಾಗಲಿದೆ. ನಿಮ್ಮ ಸ್ವಭಾವದ ಬಗ್ಗೆ ಆಕ್ಷೇಪಗಳು ಬರುತ್ತವೆ.
ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಬರಲಿದೆ. ಆಸ್ಪತ್ರೆಗೆ ಓಡಾಟ ಆಗಬಹುದು. ಅಪರಿಚಿತ ವ್ಯಕ್ತಿಗಳಿಂದ ಸಹಾಯ ಒದಗಿಬರುವ ಅವಕಾಶಗಳು ಇವೆ. ದೈವಾನುಗ್ರಹ ನಿಮ್ಮ ಮೇಲೆ ಇರಲಿದೆ. ದೂರದ ಸ್ಥಳಗಳಿಂದ ಶುಭ ವಾರ್ತೆ ಕೇಳುವ ಯೋಗ ಇದ್ದು, ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದೀರಿ.
ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬಿಡುವಿಲ್ಲದ ಓಡಾಟ ಇರುತ್ತದೆ. ಇತರರ ಮಾತನ್ನು ಕುರುಡಾಗಿ ನಂಬಿಕೊಂಡು, ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗಿಂತ ಕೆಳಗಿನ ಹಂತದಲ್ಲಿ ಕೆಲಸ ಮಾಡುವವರ ಅಗತ್ಯಗಳನ್ನು ಪೂರೈಸುವ ಬಗ್ಗೆ ಆಲೋಚನೆ ಮಾಡಿ.
ಅಡುಗೆ ವಿಚಾರವಾಗಿ ಆಕ್ಷೇಪ, ಅಸಮಾಧಾನದ ಮಾತುಗಳನ್ನು ಕೇಳಬೇಕಾದ ಸ್ಥಿತಿ ಬರುತ್ತದೆ. ಎಲ್ಲಿಂದಲೋ ಬಂದವರು, ನಿಮ್ಮ ಮೇಲೆ ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಾರೆ. ಭಾವುಕರಾಗಿ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಬೇಡಿ. ಇದು ತಾತ್ಕಾಲಿಕ ಸನ್ನಿವೇಶ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.
ಸ್ನೇಹಿತರಿಗೆ, ಸಂಬಂಧಿಕರಿಗೆ ನಿಮ್ಮಿಂದ ನೆರವು ಒದಗಿಬರುವ ಸಾಧ್ಯತೆ ಇದೆ. ನಿಮ್ಮ ಸ್ವಭಾವ ಇತರರಿಗೆ ಮೆಚ್ಚುಗೆ ಆಗಲಿದೆ. ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಒಪ್ಪಿಗೆಯೊಂದು ಸಿಗಬಹುದು. ಬಾಕಿ ಉಳಿದಿದ್ದ ಯೋಜನೆಗಳು ವೇಗ ಪಡೆಯಲಿವೆ. ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡುವುದಕ್ಕೆ ಪ್ರಯತ್ನಿಸಿ.
ಯಾರದೋ ಮುಲಾಜಿಗೆ ಬಿದ್ದು, ನಿಮಗೆ ಒಪ್ಪಿಗೆ ಆಗದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಹಿಂದೆ ಪಡೆದ ನೆರವಿನ ಕಾರಣಕ್ಕೆ ಈ ಕೆಲಸ ಮಾಡುವುದು ಅನಿವಾರ್ಯ ಎಂಬ ಸ್ಥಿತಿ ಸಹ ಉದ್ಭವಿಸಬಹುದು. ನಿರೀಕ್ಷಿತ ಮಟ್ಟದಲ್ಲಿ ಆದಾಯ ಇಲ್ಲದೆ ಚಿಂತೆಗೆ ಕಾರಣವಾಗುತ್ತದೆ.
ಪ್ರೇಮಿಗಳ ಮಧ್ಯೆ ಯಾವುದೋ ಸಣ್ಣ- ಪುಟ್ಟ ಸಂಗತಿಗಳಿಗಾದರೂ ಅಸಮಾಧಾನ ಕಾಣಿಸಿಕೊಳ್ಳಬಹುದು. ಇತರರು ಹೇಳುವ ಚಾಡಿ ಮಾತುಗಳನ್ನು ಕಿವಿ ಮೇಲೆ ಹಾಕಿಕೊಳ್ಳಬೇಡಿ. ದೈನಂದಿನ ಚಟುವಟಿಕೆಯಲ್ಲಿ ಹೆಚ್ಚಿಗೆ ತೊಡಗಿಸಿಕೊಂಡಲ್ಲಿ ಮಾನಸಿಕವಾಗಿ ನೆಮ್ಮದಿ ಕಾಣಲು ಅವಕಾಶ ಇದೆ.
ಇತರರಿಗೆ ಭಾರ ಆಗುತ್ತಿದ್ದೀನೇನೋ ಎಂಬ ಭಾವನೆ ನಿಮ್ಮಲ್ಲಿ ಮೂಡಲಿದೆ. ಇತರರ ವೈಯಕ್ತಿಕ ವಿಷಯಗಳಿಗೆ ಮೂಗು ತೂರಿಸಬೇಡಿ. ಸಂಗಾತಿಯಿಂದ ಯಾವುದಾದರೂ ವಿಷಯ ಮುಚ್ಚಿಡಲು ಪ್ರಯತ್ನಿಸಿದರೆ ಮನಸ್ತಾಪಕ್ಕೆ ಕಾರಣವಾಗಲಿದೆ. ಆದ್ದರಿಂದ ಮುಕ್ತವಾಗಿ ಮಾತನಾಡಿ.
ವಾಹನ ಚಾಲನೆ ಮಾಡುವ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಆಪ್ತರ ಜತೆಗಿನ ಸಂಬಂಧಕ್ಕೆ ಮೂರನೆಯವರು ಹುಳಿ ಹಿಂಡುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಅಪರಿಚಿತರನ್ನು ನಂಬಬೇಡಿ. ಸಂಸಾರದ ಗುಟ್ಟನ್ನು ಬಿಟ್ಟುಕೊಡಬೇಡಿ.
ಸ್ನೇಹಿತರ ಸಲುವಾಗಿ ಕೆಲವು ಸಹಾಯ, ತ್ಯಾಗ ಮಾಡಲಿದ್ದೀರಿ. ಹಣಕಾಸಿನ ಕೊರತೆ ಕಂಡುಬರಲಿದ್ದು, ಸಾಲ ಪಡೆಯುವ ಸಾಧ್ಯತೆ ಇದೆ. ಗುರು- ಹಿರಿಯರ ಜತೆಗೆ ಮಾತುಕತೆ ನಡೆಸುವಾಗ ನಾಲಗೆ ಮೇಲೆ ಹಿಡಿತ ಇರಲಿ. ಎಂದೋ ನೀವು ಮಾಡಿದ ತಪ್ಪಿಗೆ ಈಗ ಶಿಕ್ಷೆ ಅನುಭವಿಸುವಂತಾಗುತ್ತದೆ.
ನಿಮಗಿಂತ ದುರ್ಬಲರ ಬಗ್ಗೆ ಕನಿಕರ ಇರಲಿ. ಬೇರೆಯವರ ಅವಕಾಶವನ್ನು ಕಸಿಯುವುದಕ್ಕೆ ಪ್ರಯತ್ನಿಸಬೇಡಿ. ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗಬಹುದಾದ ಕೆಲವು ಬೆಳವಣಿಗೆಗಳು ನಡೆಯಲಿವೆ. ಮುಂಜಾಗ್ರತೆ ವಹಿಸಿದಲ್ಲಿ ಇದನ್ನು ತಡೆಯಬಹುದು. ಇತರರ ಭಾವನೆಗಳಿಗೆ ಗೌರವ ನೀಡಿ.
ಕುಟುಂಬದಲ್ಲಿನ ಸಮಸ್ಯೆಗಳು ಮಾತುಕತೆ ಮೂಲಕ ಬಗೆಹರಿಯುವ ಸಾಧ್ಯತೆಗಳಿವೆ. ದೂರದೃಷ್ಟಿಯಿಂದ ನೀವು ಕೈಗೊಂಡ ತೀರ್ಮಾನಗಳು ಫಲ ನೀಡಲು ಆರಂಭಿಸುತ್ತವೆ. ವೈಯಕ್ತಿಕ ಗುರಿಗಳನ್ನು ತಲುಪಲು ಸ್ನೇಹಿತರು ಮಾರ್ಗದರ್ಶನ, ಸಹಾಯ ಮಾಡಬಹುದು. ಸರಿ- ತಪ್ಪುಗಳ ಆಯ್ಕೆ ಬಗ್ಗೆ ವಿವೇಚನೆ ಇರಲಿ.
Tags:
ದಿನ ಭವಿಷ್ಯ