ಕಾರವಾರ: ಕೋವಿಡ್-19 ಸೋಂಕು ಜಿಲ್ಲೆಯಲ್ಲಿ ಇದುವರೆಗೂ ನಿಯಂತ್ರಣಕ್ಕೆ ಬರದೇ ಇರುವ ಕಾರಣ ಡಿಸಿ ಡಾ. ಹರೀಶಕುಮಾರ ಕೆ. ಅವರು ಸಾರ್ವಜನಿಕ ಹಿತದೃಷ್ಟಿಯಿಂದ ದಂಡ ಸಂಹಿತೆ ಕಲಮ್ 144 ರನ್ವಯ ಮಾರ್ಚ್ 31 ರವರೆಗೆ ಆದೇಶ ಮಾಡಿದ್ದ ನಿಷೇಧಾಜ್ಞೆಯನ್ನು ಮುಂದಿನ ಆದೇಶದ ವರೆಗೂ ಅನಿರ್ಧಿಷ್ಆವಧಿ ವಿಸ್ತರಿಸಿದ್ದಾರೆ.
ಮುಂದಿನ ಆದೇಶದವರೆಗು ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಭಟ್ಕಳದಲ್ಲಿ ಎಂಟು ಪ್ರಕರಣಗಳು ಪತ್ತೆಯಾಗುವ ಜೊತೆಗೆ ಹೆಚ್ಚಿನ ಜನರಲ್ಲಿ ಸೊಂಕು ಹರಡುವ ಸಾಧ್ಯತೆಗಳು ಹೆಚ್ಚಿದ್ದು ಭಟ್ಕಳದಲ್ಲಿ ಹೆಲ್ತ್ ಎಮರ್ಜನ್ಸಿ ಆದೇಶದ ನಡುವೆಯೇ ಜಿಲ್ಲೆಯಾಧ್ಯಾಂತ 144 ಸೆಕ್ಷನ್ ಅನ್ನು ಮುಂದುವರೆಸಿದ್ದಾರೆ