ದಯಾ- ದಾಕ್ಷಿಣ್ಯ ಇಲ್ಲದೆ ಟೀಕೆ ಮಾಡುವ ನಿಮ್ಮ ಪ್ರವೃತ್ತಿ ಬಗ್ಗೆ ಇತರರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ವ್ಯಾಪಾರಿಗಳು- ಉದ್ಯಮಿಗಳು ಹೆಚ್ಚು ನಷ್ಟವನ್ನು ಕಾಣುವಂತಾಗುತ್ತದೆ. ಯಾವುದೇ ಮುಖ್ಯ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪರಿಣಾಮಗಳ ಬಗ್ಗೆ ಆಲೋಚನೆಯನ್ನು ಮಾಡಿ ಮುಂದುವರಿಯಿರಿ.
ನೀವೇ ಮಾಡಿಕೊಂಡಿದ್ದ ಹಲವು ಸವಲತ್ತುಗಳು ಈ ದಿನ ಕೈ ಕೊಡುವ ಸಾಧ್ಯತೆಗಳಿವೆ. ಉದಾಹರಣೆಗೆ ಯುಪಿಎಸ್, ಇಂಟರ್ ನೆಟ್, ಮೊಬೈಲ್ ಬ್ಯಾಟರಿ... ಹೀಗೆ. ನೀವು ಅಂದುಕೊಳ್ಳುವ ಮಟ್ಟಕ್ಕೆ ಉತ್ತಮ ಕೆಲಸ ಮಾಡುವುದು ಅಸಾಧ್ಯವಾಗುತ್ತದೆ. ಚಿಂತೆ ಮಾಡದೆ, ಪರ್ಯಾಯಗಳನ್ನು ಮಾಡಿಟ್ಟುಕೊಳ್ಳಿ.
ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ಪರಸ್ಥಳದಲ್ಲಿ ವಾಸ ಮಾಡುತ್ತಿರುವವರಿಗೆ ಹೊಸ ವ್ಯಕ್ತಿಗಳ ಪರಿಚಯದ ಮೂಲಕ ಅನುಕೂಲ ದೊರೆಯಲಿದೆ. ಅಂದುಕೊಳ್ಳದ ಮೂಲಗಳಿಂದ ಹಣಕಾಸು ಸೌಲಭ್ಯ ದೊರೆಯಲಿದೆ.
ಯಾವುದೇ ಸಣ್ಣ ಕೆಲಸವಾದರೂ ಶ್ರದ್ಧೆ- ಏಕಾಗ್ರತೆಯಿಂದ ಮಾಡಿ. ನಿಮ್ಮನ್ನು ಪರೀಕ್ಷೆ ಮಾಡಲೆಂದು ಕೆಲವು ಸವಾಲುಗಳನ್ನು ಒಡ್ಡಲಾಗುತ್ತದೆ. ಪಾರಂಪರಿಕವಾಗಿ ಮಾಡಿಕೊಂಡು ಬಂದ ವೃತ್ತಿಯನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯ ಗೋಚರ ಆಗುತ್ತದೆ. ಕೈಗೆ ಪೂರ್ತಿ ಹಣ ಬರುವ ತನಕ ಮನಸ್ಸಿನಲ್ಲಿ ಮಂಡಿಗೆ ತಿನ್ನಬೇಡಿ.
ಸ್ವಾದಿಷ್ಟವಾದ ಆಹಾರ ಖಾದ್ಯಗಳನ್ನು ಸವಿಯುವ ಯೋಗ ಇದೆ. ಕೆಲಸಗಳನ್ನು ಯಾವುದು ಮೊದಲು ಹಾಗೂ ಯಾವುದು ಕೊನೆಗೆ ಎಂದು ಆದ್ಯತೆ ಮಾಡಿಕೊಂಡು ಆ ನಂತರ ಮಾಡಿ. ನಿಮ್ಮ ಬುದ್ಧಿವಂತಿಕೆಗಿಂತ ಪ್ರಾಮಾಣಿಕತೆಯ ಅಗತ್ಯ ಹೆಚ್ಚಿಗೆ ಇದೆ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಹಳೇ ಸಿಟ್ಟನ್ನು ತೀರಿಸಿಕೊಳ್ಳುವುದಕ್ಕೆ ಇದು ಸಮಯ ಅಲ್ಲ. ಯಾರಿಗೂ ಚುಚ್ಚು ಮಾತನಾಡಬೇಡಿ. ವಾಸ್ತವ ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡಿದ್ದಾರೆ ಎಂಬ ಆರೋಪ ಹೊರೆಸಿ, ಯಾರ ಕೆಲಸವನ್ನು ಕಳೆಯಬೇಡಿ. ಈ ದಿನ ಸಿಟ್ಟು ಕಡಿಮೆ ಮಾಡಿಕೊಳ್ಳಿ. ತಾಳ್ಮೆ ಹೆಚ್ಚಿಸಿಕೊಳ್ಳಿ.
ವೀರತನದ ಮಾತುಗಳನ್ನು ಆಡುವ ಮುನ್ನ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಎಲ್ಲಿಂದಲೋ ಬರಬೇಕಾದ ಹಣ ಅಥವಾ ಆದಾಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಯಾರಿಗೂ ನೆರವಿನ ಮಾತು ನೀಡಬೇಡಿ. ಸಂಗಾತಿ- ಮಕ್ಕಳ ಮಾತನ್ನು ಕೂಡ ಗಂಭೀರವಾಗಿ ತೆಗೆದುಕೊಳ್ಳಿ.
ಪರಸ್ಥಳ ವಾಸದಿಂದ ಮಾನಸಿಕ ಚಿಂತೆಗೆ ಗುರಿಯಾಗುತ್ತೀರಿ. ಬದಲಾವಣೆಯನ್ನು ಬಯಸಿದರೂ ಕಾನೂನು ಮಾರ್ಗದಲ್ಲೇ ಮುಂದುವರಿಯಿರಿ. ಸ್ನೇಹಿತರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ತಂದೆ- ತಾಯಿ ಜತೆಗೆ ಮನಸ್ತಾಪ ಸೃಷ್ಟಿಯಾಗಬಹುದು.
ಉತ್ಸಾಹದಿಂದ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ನಿಮ್ಮ ಸಲಹೆ ಕೇಳಿ ಸ್ನೇಹಿತರು- ಸಂಬಂಧಿಕರ ಆಗಮನ ಆಗಬಹುದು. ಗುರು- ಹಿರಿಯರ ಆಶೀರ್ವಾದದಿಂದ ಶುಭ ಸುದ್ದಿ ಕೇಳುವ ಯೋಗವಿದೆ. ದೇವತಾ ಚಿಂತನೆ, ದಾನ- ಧರ್ಮಾದಿ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಇದೆ.
ನಿಶ್ಚಯಿಸಿಕೊಂಡು ಕೆಲಸ- ಕಾರ್ಯಗಳಲ್ಲಿ ಹಿನ್ನಡೆ ಆಗಲಿದೆ. ಯಾರನ್ನೇ ನಂಬಿಕೊಂಡು, ಸರ್ಕಾರಿ ಕೆಲಸಗಳನ್ನು ಮಾಡಿಕೊಡುವುದಾಗಿ ಬೇರೆಯವರಿಗೆ ಮಾತು ನೀಡಬೇಡಿ. ಈ ದಿನ ಹೆಚ್ಚು ಮಾತನಾಡದಿರುವುದು ಸೂಕ್ತ. ಇಲ್ಲದಿದ್ದಲ್ಲಿ ವಿನಾಕಾರಣ ಸಿಟ್ಟು, ಜಗಳಕ್ಕೆ ಕಾರಣ ಆಗಬಹುದು.
ಆರೋಗ್ಯದ ರಕ್ಷಣೆ ಕಡೆಗೆ ಹೆಚ್ಚಿನ ಗಮನ ನೀಡಲಿದ್ದೀರಿ. ಮನೆಯ ಸ್ವಚ್ಛತೆಗಾಗಿ ಖರ್ಚು ಮಾಡಲಿದ್ದೀರಿ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಚಾರ ಸಿಗಲಿದೆ. ನಿಮ್ಮ ಕಾರ್ಯಗಳಿಗೆ ಮನ್ನಣೆ ದೊರೆಯಲಿದೆ. ಮರ ನೀಡುವುದು, ಗಾರ್ಡನಿಂಗ್ ನಂಥ ಹವ್ಯಾಸ ಆರಂಭಿಸಲಿದ್ದೀರಿ.
ತೀವ್ರ ಹಣಕಾಸಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಮುಖ್ಯ ಕಾಗದ ಪತ್ರಗಳು, ಬೆಲೆ ಬಾಳುವ ವಸ್ತುಗಳ ಬಗ್ಗೆ ಗಮನ ಇರಲಿ. ಏಕೆಂದರೆ ಅವುಗಳು ಕಳುವಾಗುವ ಅಥವಾ ಕಳೆದುಹೋಗುವ ಸಾಧ್ಯತೆ ಇದೆ. ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಅಪರಿಚಿತ ವ್ಯಕ್ತಿಯ ಮೋಹಕ್ಕೆ ಸಿಲುಕಲಿದ್ದೀರಿ.
Tags:
ದಿನ ಭವಿಷ್ಯ