ಕುಮಟಾ: ಗುಜರಿ ಸಾಮಾನು ತುಂಬಿರುವ ಲಗೇಜ್ ರಿಕ್ಷಾವೊಂದು ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ಗಾಯಗೊಂಡ ಘಟನೆ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ.
ಹೊಲನಗದ್ದೆ ಹವ್ಯಕ ಕಲ್ಯಾಣ ಮಂಟಪದ ಹತ್ತಿರ ಲಗೇಜ್ ರಿಕ್ಷಾ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು,ರಿಕ್ಷಾದಲ್ಲಿದ್ದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹೊರತೆಗೆದಿದ್ದು, ಡ್ರೈವರ್ ಸೀತಾರಾಮ ಶಂಕರ ನಾಯ್ಕ್ ರವರು ರಿಕ್ಷಾ ಒಳಗಡೆ ಸಿಲುಕಿದ್ದು ಸ್ಥಳೀಯರಿಂದ ಹೊರತೆಗೆಯಲಾಗದ ಕಾರಣ ಸ್ಥಳಿಯರು ಕುಮಟಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಯವರು ರಿಕ್ಷಾದಲ್ಲಿ ಸಿಲುಕಿದ ಡ್ರೈವರ್ ರವರನ್ನು ಸಾರ್ವಜನಿಕರ ಸಹಕಾರದಿಂದ ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ,ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.