ಖುಷಿಖುಷಿಯಾಗಿ ದಿನ ಕಳೆಯುವಂಥ ವಾತಾವರಣ ಇರುತ್ತದೆ. ಕುಟುಂಬದವರ ಅಗತ್ಯಗಳನ್ನು ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸುತ್ತೀರಿ. ಉದ್ಯೋಗಸ್ಥರಿಗೆ ಸ್ವಂತ ವ್ಯಾಪಾರ - ವ್ಯವಹಾರ ಆರಂಭಿಸುವ ಉಮೇದು ಬರುತ್ತದೆ. ಬ್ಯಾಂಕ್ ವ್ಯವಹಾರಗಳನ್ನು ಬಾಕಿ ಉಳಿಸಿಕೊಂಡಿದ್ದಲ್ಲಿ ಪೂರ್ತಿ ಮಾಡಿಕೊಳ್ಳುವುದು ಉತ್ತಮ
ಮಧುಮೇಹ- ರಕ್ತದೊತ್ತಡ, ಕಿಡ್ನಿ ಸಮಸ್ಯೆ ಇರುವಂಥವರು ಆಹಾರ ಸೇವನೆ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ಸಣ್ಣ ಏರುಪೇರಾದರೂ ಕೂಡಲೇ ವೈದ್ಯರನ್ನು ಭೇಟಿಯಾಗಿ. ಸಂಗಾತಿಯ ಪೋಷಕರ ಕಡೆಯಿಂದ ಕೆಲವು ಬೇಡಿಕೆಗಳು ಬರಬಹುದು. ಅವುಗಳನ್ನು ಪೂರೈಸುವುದು ನಿಮಗೆ ಕಷ್ಟವಾಗಬಹುದು.
ಸಂಬಂಧಿಕರು, ಸ್ನೇಹಿತರಿಂದ ಪಡೆದಿದ್ದ ಸಾಲ ಹಿಂತಿರುಗಿಸಬೇಕಾಗುತ್ತದೆ. ಇದಕ್ಕಾಗಿ ಮತ್ತೆ ಸಾಲ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಬಹುದು. ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚಾಗಲಿದೆ. ಯಾರನ್ನು ನೀವು ಹೆಚ್ಚು ನಂಬಿದ್ದರೋ ಅಂಥವರಿಂದಲೇ ವಂಚನೆ ಆಗುವ ಸಾಧ್ಯತೆ ಇದೆ, ಎಚ್ಚರಿಕೆ.
ಹೊಸ ಗ್ಯಾಜೆಟ್, ಲ್ಯಾಪ್ ಟಾಪ್, ಗೃಹಾಲಂಕಾರ ವಸ್ತುಗಳ ಖರೀದಿಗಾಗಿ ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಕೊಟ್ಟ ಮಾತಿನಂತೆಯೇ ನಡೆದುಕೊಳ್ಳಲಿಕ್ಕೆ ನೀವು ಮಾಡುವ ಪ್ರಯತ್ನಕ್ಕೆ ಇತರರು ಶ್ಲಾಘಿಸುತ್ತಾರೆ. ಸ್ವಲ್ಪ ಮಟ್ಟಿಗೆ ಮರೆವು ಕಾಡಬಹುದು.
ಸ್ನೇಹಿತರು- ಬಂಧುಗಳ ಜತೆಗೆ ಸಣ್ಣ- ಪುಟ್ಟ ವಿಚಾರಕ್ಕಾದರೂ ಜೋರು ಮಾತುಕತೆ ನಡೆಯಲಿದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರು ಪೋಸ್ಟ್ ಷೇರ್, ಕಮೆಂಟ್ ಮಾಡುವಾಗ ಪೂರ್ವಾಪರ ಆಲೋಚಿಸಿ. ಯಾರ ಮೇಲೇ ಆರೋಪ ಮಾಡುವಾಗ ಸೂಕ್ತ ದಾಖಲೆ ಇದೆಯೇ ಎಂಬುದನ್ನು ಪರಿಶೀಲಿಸಿ.
ಸಮಾಜಮುಖಿ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಲಿದ್ದೀರಿ. ನಿಮ್ಮ ಕೈಯಿಂದ ಹಣ ಖರ್ಚು ಮಾಡಿದರೂ ದಾನ- ಧರ್ಮಾದಿ ಕಾರ್ಯಗಳಿಗೆ ಎಂದು ಬಳಸಲಿದ್ದೀರಿ. ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ಸಲುವಾಗಿ ಬಜೆಟ್ ಲೆಕ್ಕಾಚಾರ ಮಾಡಲಿದ್ದೀರಿ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿ.
ಪ್ರೇಮಿಗಳಿಗೆ ಸಂತೋಷವಾದ ದಿನ ಇದು. ಬಹಳ ಕಾಲದಿಂದ ಹೇಳಿಕೊಳ್ಳಬೇಕು ಎಂದುಕೊಂಡಿದ್ದ ವಿಚಾರವನ್ನು ನಿಮ್ಮ ಪ್ರೀತಿಪಾತ್ರರ ಜತೆ ಹಂಚಿಕೊಳ್ಳಲಿದ್ದೀರಿ. ಸಾಲ ಮರುಪಾವತಿ ಮಾಡುವುದಕ್ಕೆ ಗಂಭೀರ ಪ್ರಯತ್ನಗಳನ್ನು ಮಾಡಲಿದ್ದೀರಿ. ಸೋದರ- ಸೋದರಿಯರ ನೆರವು ಸಿಗಬಹುದು.
ಪಾರದರ್ಶಕತೆಯಿಂದ ನಡೆದುಕೊಳ್ಳಿ. ನಿಮ್ಮ ಸಾಮರ್ಥ್ಯ ಕಂಡು ಸಹೋದ್ಯೋಗಿಗಳು ಅಚ್ಚರಿ ಪಡುತ್ತಾರೆ. ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಇರಲಿದ್ದು, ಆಸ್ತಿ ಖರೀದಿ ಪ್ರಸ್ತಾವ ಬರಲಿದೆ. ಆದರೆ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸರಿಯಾಗಿ ಅಳೆದು, ಆ ನಂತರ ಮುಂದಕ್ಕೆ ಹೆಜ್ಜೆ ಇಡಿ.
ನಿಮ್ಮ ಲೆಕ್ಕಾಚಾರದಂತೆಯೇ ಹಲವು ಬೆಳವಣಿಗೆಗಳು ನಡೆಯುತ್ತವೆ. ನಿಮ್ಮ ಕ್ರಿಯೇಟಿವ್ ಆಲೋಚನೆ ಕಂಡು ಇತರರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ಇರುವ ಹಳೆಯ ವಸ್ತುವನ್ನು ಮಾರುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಹೊಸ ವಿಷಯಗಳನ್ನು ಕಲಿಯಲು ಅವಕಾಶ ದೊರೆಯಲಿದೆ.
ಧರ್ಮ- ಅಧ್ಯಾತ್ಮ ವಿಚಾರಗಳ ಬಗ್ಗೆ ಚಿಂತನೆ ನಡೆಸುತ್ತೀರಿ. ಉದ್ಯೋಗ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುವಂಥ ಬೆಳವಣಿಗೆ ಆಗಲಿದೆ. ಕೈಯಲ್ಲಿ ಇರುವ ಉಳಿತಾಯ ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಕರಿದ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರ ಇರಿ.
ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಹಣ ಪಡೆದರೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ವಾಸ್ತವ ನೆಲೆಗಟ್ಟಿನಲ್ಲಿ ಸನ್ನಿವೇಶವನ್ನು ಪರಾಂಬರಿಸಿ. ಈ ಸಮಯದ ಅಗತ್ಯವನ್ನು ಅರಿತುಕೊಂಡು, ಮುಂದಕ್ಕೆ ಹೆಜ್ಜೆ ಇಡಿ. ಮನರಂಜನೆ ಸಲುವಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಭವಿಷ್ಯದ ಉಳಿತಾಯದ ಕಡೆಗೆ ಗಮನ ನೀಡಿ.
ಮನೆ ದುರಸ್ತಿ, ವಾಹನ ದುರಸ್ತಿ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳಿಗಾಗಿ ಖರ್ಚು ಮಾಡಬೇಕಾದ ಸನ್ನಿವೇಶ ಉದ್ಭವಿಸುತ್ತದೆ. ದೂರಾಲೋಚನೆಯಿಂದ ನೀವು ಕೈಗೊಂಡಿದ್ದ ನಿರ್ಧಾರವು ಈಗ ಫಲ ನೀಡಲಿದೆ. ಬರಬೇಕಾದ ಸಾಲವನ್ನು ಬಾಯಿ ಬಿಟ್ಟು ಕೇಳಿ. ಸಂಕೋಚ ಪಟ್ಟುಕೊಂಡರೆ ಪ್ರಯೋಜನ ಇಲ್ಲ.
Tags:
ದಿನ ಭವಿಷ್ಯ