ನೀವು ಕೂಡಿಟ್ಟಿರುವ ಹಣವನ್ನು ಲಪಟಾಯಿಸಲು ಅಧಿಕ ಬಡ್ಡಿಯ ಆಸೆ ತೋರಿಸಬಹುದು. ಆದಾಯ ಹೆಚ್ಚಿಸಿಕೊಳ್ಳಲೇಬೇಕು ಎಂಬ ಕಾರಣಕ್ಕೆ ಅಪಾಯಕಾರಿ ವ್ಯವಹಾರಗಳಿಗೆ ಕೈ ಹಾಕಬೇಡಿ. ಸ್ನೇಹಿತರು- ಸಂಬಂಧಿಗಳನ್ನು ತಾತ್ಸಾರದಿಂದ ನೋಡುವ ಮನೋಭಾವವನ್ನು ಬಿಡುವುದು ಒಳ್ಳೆಯದು.
ಮಕ್ಕಳ ಭವಿಷ್ಯಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಆಸ್ತಿ ಮಾರುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಅಥವಾ ನಿಮ್ಮದೇ ಉಳಿತಾಯದಿಂದ ದೊಡ್ಡ ಮೊತ್ತವನ್ನು ತೆಗೆದು, ಅದನ್ನು ಮಕ್ಕಳಿಗಾಗಿ ಮೀಸಲಿರಿಸಲಿದ್ದೀರಿ. ಯಾವುದೇ ಮುಖ್ಯ ಕೆಲಸಕ್ಕೆ ತೊಡಗುವ ಮುನ್ನ ಮಹಾ ವಿಷ್ಣುವಿನ ಸ್ಮರಣೆ ಮಾಡಿ.
ನಿಮಗೆ ವಯಸ್ಸಿನಲ್ಲಿ ಹಿರಿಯರ ಕೋಪಕ್ಕೆ ಕಾರಣರಾಗುತ್ತೀರಿ. ಯಾರದೋ ಸಲುವಾಗಿ ನಿಮಗೆ ಬಂದ ಅವಕಾಶವನ್ನು ಬಿಟ್ಟುಕೊಡಬೇಕಾಗುತ್ತದೆ. ಹಿರಿಯ ಅಧಿಕಾರಿಗಳ ಆದೇಶ ಪಾಲನೆಯಲ್ಲಿ ವ್ಯತ್ಯಾಸವಾಗಿ, ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ಇರಬೇಕು.
ನಿರ್ದಿಷ್ಟ ಉದ್ದೇಶಕ್ಕಾಗಿ ಮೀಸಲಾಗಿಟ್ಟಿದ್ದ ಹಣದ ಬಳಕೆ ಈಗ ಅನಿವಾರ್ಯವಾಗಿ ಮಾಡಬೇಕಾಗುತ್ತದೆ. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚುಗಳು ಬರಲಿವೆ. ನಿಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸ ಕಡಿಮೆ ಆಗಲಿದೆ. ಯಾರದೋ ಚಾಡಿ ಮಾತಿನಿಂದ ದೊಡ್ಡ ಅವಕಾಶ ಕೈ ತಪ್ಪಲಿದೆ.
ಕೆಲವು ವಿಚಾರಗಳಲ್ಲಿ ಮೊಂಡುತನ ಮಾಡುವಿರಿ. ಈಗಾಗಲೇ ಮಾಡಿರುವ ಹೂಡಿಕೆಯಲ್ಲಿ ಅಲ್ಪ ಪ್ರಮಾಣದ ಲಾಭ ಕಾಣಿಸಲಿದೆ. ಅನುಭವಿಗಳ ಮಾರ್ಗದರ್ಶನ ಪಡೆದು, ಮುಂದಿನ ಹೆಜ್ಜೆಗಳನ್ನು ಇಡಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇರಲಿ. ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದ ಇರಿ.
ಸೋದರ ಸಂಬಂಧಿಗಳು ನೆರವು ಕೇಳಿಕೊಂಡು ಬರಬಹುದು. ತಂದೆಯವರು ನಿಮ್ಮ ಗುಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ. ನಾನು ತಿಳಿದಿದ್ದೇ ಸರಿ ಎಂಬ ಧೋರಣೆ ಬೇಡ. ವ್ಯಾಪಾರಿಗಳು- ಉದ್ಯಮಿಗಳಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ವೃತ್ತಿಪರರಿಗೆ ಆದಾಯದಲ್ಲಿ ಕುಸಿತ.
ನಿಮ್ಮ ಕಾರ್ಯ ವೈಖರಿಗೆ ಇತರರು ಮೆಚ್ಚುಗೆ ಸೂಚಿಸುತ್ತಾರೆ. ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮೂಲಕ ನಿಮ್ಮ ಸಾಮರ್ಥ್ಯ ಸಾಬೀತು ಮಾಡಿಕೊಳ್ಳುವ ಅವಕಾಶ ದೊರಕಿಸಿಕೊಳ್ಳುತ್ತೀರಿ. ಭಾರೀ ವಾಹನಗಳ ಚಾಲಕರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಲೇವಾದೇವಿ ವ್ಯವಹಾರ ಮಾಡುವವರಿಗೆ ಸವಾಲಿನ ದಿನ.
ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪ ತಲೆದೋರುತ್ತದೆ. ದೀರ್ಘ ಕಾಲದ ಒಡನಾಟ ಹೊಂದಿರುವ ಆಪ್ತರ ಜತೆಗೆ ವಿನಾಕಾರಣ ಅಭಿಪ್ರಾಯ ಭೇದಗಳು ಬರುತ್ತವೆ. ಈ ಹಿಂದೆ ನೀವಾಡಿದ್ದ ಮಾತುಗಳೇ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಯಾರ ಜತೆಗೂ ವಾಗ್ವಾದ ಬೇಡ.
ಪಿತ್ರಾರ್ಜಿತ ಆಸ್ತಿ ವಿಚಾರಕ್ಕಾಗಿ ಕುಟುಂಬದಲ್ಲಿ ಮಾತಿಗೆ ಮಾತು ಬೆಳೆಯುವ ಸಾಧ್ಯತೆ ಇದೆ. ಇಂದಿನ ಸ್ಥಿತಿಗೆ ನಿಮ್ಮ ಬೇಜವಾಬ್ದಾರಿಯೇ ಕಾರಣ ಎಂದು ಆರೋಪ ಹೊತ್ತಿಕೊಳ್ಳಬೇಕಾಗುತ್ತದೆ. ಸ್ವಂತ ನಿರ್ಧಾರಗಳನ್ನು ಮಾಡುವಾಗ ಅದರ ಪರಿಣಾಮ ಏನಾಗಬಹುದು ಎಂಬ ಬಗ್ಗೆಯೂ ಆಲೋಚಿಸಿ.
ಪ್ರೀತಿಪಾತ್ರರಿಗೆ ಉಡುಗೊರೆ ನೀಡುವ ನಿಮ್ಮ ಆಲೋಚನೆ ಈಡೇರುವುದು ಕಷ್ಟವಾಗಲಿದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಇತರರಿಗೆ ಮಾದರಿ ಆಗುವಂಥ ತೀರ್ಮಾನ ತೆಗೆದುಕೊಳ್ಳಲಿದ್ದೀರಿ. ಇತರರ ಮಾತುಗಳಿಗೆ ಕಿವಿಗೊಡಬೇಡಿ. ನಿಮ್ಮನ್ನು ಹೊಗಳಿ, ತಮ್ಮ ಕೆಲಸ ಮಾಡಿಸಿಕೊಳ್ಳಲು ಕೆಲವರು ಪ್ರಯತ್ನಿಸಬಹುದು.
ಕೋರ್ಟ್ ವ್ಯಾಜ್ಯಗಳು ನಿಮ್ಮ ವಿರುದ್ಧವಾಗಿ ಆಗಬಹುದು ಎಂಬ ಸೂಚನೆ ನಿಮಗೆ ದೊರಕಬಹುದು. ಮಹತ್ವದ ದಾಖಲೆ- ಪತ್ರಗಳನ್ನು ನಿಮ್ಮ ಬಳಿ ಜೋಪಾನವಾಗಿ ಇಟ್ಟುಕೊಳ್ಳಿ. ಈ ಸಂದರ್ಭದಲ್ಲಿ ಯಾರನ್ನೂ ಸುಖಾ ಸುಮ್ಮನೆ ನಂಬದಿರಿ. ಅಂತರಂಗದ ವಿಚಾರಗಳನ್ನು ಹಂಚಿಕೊಳ್ಳಬೇಡಿ.
ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಭಾರೀ ಇಳಿಕೆ ಕಾಣಿಸಲಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಷ್ಟವಾಗುತ್ತದೆ. ವೈಯಕ್ತಿಕವಾಗಿ ಯಾರನ್ನು ನೀವು ದ್ವೇಷಿಸುತ್ತೀರೋ ಅಂಥವರ ಜತೆಗೆ ಕೆಲಸ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು.
Tags:
ದಿನ ಭವಿಷ್ಯ