ಮುರುಡೇಶ್ವರ: ಸಂಕಟ ಬಂದಾಗ ವೆಂಕಟರಮಣ ಎಂಬ ಗಾದೆಯಂತೆ ದೇವಸ್ಥಾನಕ್ಕೆ ಹೋಗೋಣವೆಂದರೆ ಈಗ ದೇವಾಲಯಕ್ಕೂ ವೈರಸ್ ಕಾಟ ತಟ್ಟಿದೆ.ಬಿದ್ದಿದ ಯಾವತ್ತೂ ಮುಚ್ಚಿದ ಉದಾಹರಣೆಗಳೇ ಇಲ್ಲದ ಪುರಾಣ ಪ್ರಸಿದ್ಧ ದೇವಾಲಯಗಳು ಕೂಡ ಕೊರೊನಾ ವೈರಸ್ನಿಂದ ಮುಚ್ಚಲ್ಪಟ್ಟಿದೆ.
ಕೊರೊನಾ ವೈರಸಿನ ಆಯುಸ್ಸಿನ ಬಗ್ಗೆ ಈಗಾಗಲೇ ಹಲವಾರು ಜ್ಯೋತಿಷಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ಈಗಾಗಲೇ ಮಂಡಿಸಿದ್ದಾರೆ. ಇದೀಗ ರಾಜ್ಯದ ಐತಿಹಾಸಿಕ ದೇವಾಲಯಗಳಲ್ಲಿ ಒಂದಾದ ಮುಡೇಶ್ವರ ದೇವಸ್ಥಾನದಲ್ಲಿ ಕೊರೊನಾ ವೈರಸಿನ ಬಗ್ಗೆ ಪ್ರಶ್ನೆಯನ್ನು ದೇಗುಲದ ಸಂಪ್ರದಾಯದ ಪ್ರಕಾರ ಕೇಳಲಾಗಿದೆ.
ಜಗತ್ತಿನಾದ್ಯಂತ ಮಾರಕವಾಗಿ ಕಾಡುತ್ತಿರುವ ಕೋರುವವರು ಸೋಂಕಿನ ಬಗ್ಗೆ ಮುಡೇಶ್ವರ ದೇವಾಲಯದಲ್ಲಿ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಮುರುಡೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು
ನಾವೆಲ್ಲ ನಿನ್ನ ಭಕ್ತರು ನಿನ್ನಲ್ಲಿ ಪ್ರಾರ್ಥಿಸುತ್ತಿದ್ದೇವೆ. ಜಗತ್ತಿಗೆ ಎದುರಾಗಿರುವ ಈ ಕಂಟಕವನ್ನು ನೀನೇ ದೂರಮಾಡಬೇಕು
ಎಂದು ಶಿವಲಿಂಗದ ಮೇಲೆ ಹೂವನ್ನಿಟ್ಟು ಪ್ರಾರ್ಥಿಸಿದ್ದಾರೆ.
ಶಿವಲಿಂಗದ ಬಲಭಾಗದಿಂದ ಹೂವು ಬಿದ್ದಿದೆ
ಇಡೀ ಜಗತ್ತೇ ಕರೋನವೈರಸ್ ಎನ್ನುವ ಮಹಾಮಾರಿ ಯಿಂದ
ಹೆಣಗಾಡುತ್ತಿದೆ. ಇದರಿಂದ ಜಗತ್ತನ್ನು ರಕ್ಷಿಸು ಎಂದು ಇಲ್ಲಿನ ಅರ್ಚಕರು ಪ್ರಾರ್ಥಿಸಿದಾಗ ಶಿವಲಿಂಗದ ಬಲಭಾಗದಿಂದ ಹೂವು ಬಿದ್ದಿದೆ. ಇದಾದ ನಂತರ ಅರ್ಚಕರು ಮತ್ತೊಮ್ಮೆ ಪೂಜೆಯನ್ನು ಸಲ್ಲಿಸಿ ಎಲ್ಲರನ್ನೂ ಕಾಪಾಡು ಎಂದು ಪ್ರಾರ್ಥಿಸಿದ್ದಾರೆ.
ಇಲ್ಲಿನ ಜನರ ನಂಬಿಕೆ
ಇಲ್ಲಿನ ಕರಾವಳಿ ಭಾಗದಲ್ಲಿ ಹಲವು ದೇವಾಲಯಗಳಲ್ಲಿ ದೇವರ ಮೇಲೆ ಹೂವನ್ನಿಟ್ಟು ಕಷ್ಟ ಕೇಳುವ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಬಲಭಾಗದಿಂದ ಹೂವು ಬಿದ್ದರೆ ಅದು ಶುಭ ಮತ್ತು ಎಡಭಾಗದಿಂದ ಹೋಗಿದ್ದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.