ಭಟ್ಕಳ, ಮಾರ್ಚ್ 27: ಮಾರ್ಚ್ 18 ರಂದು ಮುಂಬೈನಿಂದ ಭಟ್ಕಳಗೆ ಪ್ರಯಾಣಿಸಿದ 72 ವರ್ಷದ ವ್ಯಕ್ತಿಯೊಬ್ಬರಲ್ಲಿ ಕರೋನವೈರಸ್ ಸೋಂಕು ಧನಾತ್ಮಕವಾಗಿ ಕಂಡು ಬಂದ ನಂತರ, ಇವರ ಜೊತೆ ಪ್ರಯಾಣ ಮಾಡಿದ ಇನ್ನುಳಿದ ಮೂವರು ಪ್ರಯಾಣಿಕರು ರತ್ನಾಗಿರಿಯಲ್ಲಿ ಇಳಿದಿದ್ದರಿಂದ ಅವರನ್ನು ಹುಡುಕುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಆ ವ್ಯಕ್ತಿ ದುಬೈನಿಂದ ಹಿಂದಿರುಗಿ ಚತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್-ಮಂಗಳೂರು ರೈಲನ್ನು ತೆಗೆದುಕೊಂಡಿದ್ದ. ಅವನ ಜೊತೆ ಮತ್ತೆ ಮೂವರು ಪ್ರಯಾಣಿಕರು ರತ್ನಗಿರಿಯಲ್ಲಿ ಇಳಿದಿದ್ದರು. ಆದರೆ ಟಿಕೆಟ್ ಕಾಯ್ದಿರಿಸುವಾಗ ಅವರು ತಮ್ಮ ಸಂಪರ್ಕ ಮಾಹಿತಿಯನ್ನು ನೀಡಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಕೊಂಕಣ ರೈಲ್ವೆಯ ಮುಖ್ಯ ಜನಸಂಪರ್ಕ ಅಧಿಕಾರಿ ಎಲ್ ಕೆ ವರ್ಮಾ ಅವರು, ಮಹಾರಾಷ್ಟ್ರದ ವಿವಿಧ ನಿಲ್ದಾಣಗಳಲ್ಲಿ ಈ ರೈಲಿನಿಂದ ಇಳಿದ 20 ಪ್ರಯಾಣಿಕರಲ್ಲಿ ಈಗಾಗಲೇ 17 ಪ್ರಯಾಣಿಕರ ದೂರವಾಣಿ ಸಂಖ್ಯೆಯನ್ನು ಪಡೆಯಲಾಗಿದೆ ಮತ್ತು ಅದನ್ನು ರಾಜ್ಯ ಆರೋಗ್ಯ ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
COVID - 19 ಪೊಸಿಟಿವ್ ಕಂಡುಬಂದ ಪ್ರಯಾಣಿಕರು ಮಾರ್ಚ್ 18 ರಂದು ಭಟ್ಕಳಗೆ ತಲುಪಿದ ಈ ರೈಲಿನ ಎಸ್ 3 ಕೋಚ್ನ ಕೆಳಭಾಗದಲ್ಲಿ ಪ್ರಯಾಣಿಸಿದ್ದರು. ಈ ಕೋಚ್ನಲ್ಲಿ ಪ್ರಯಾಣಿಸಿದ ಪ್ರಯಾಣಿಕರು 104, 080-46848600 ಅಥವಾ 080- 66692000 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.